October 4, 2025

ಮನೆಮನೆ ಪೊಲೀಸ ಭೇಟಿ ಜನರಿಂದ ಭರ್ಜರಿ ಸ್ಪಂದನೆ, ಜಿಲ್ಲೆಯಲ್ಲಿ 47% ಮನೆಗಳಿಗೆ ಭೇಟಿ ಪೂರ್ಣ: ಎಸ್ಪಿ ದೀಪನ್ ಎಂ.ಎನ್.

ಭಟ್ಕಳ: ಜಿಲ್ಲಾಧ್ಯಂತ ಎರಡು ತಿಂಗಳಿನಿAದ ಜಾರಿಯಲ್ಲಿರುವ ಮನೆ ಮನೆ ಪೊಲೀಸ ಭೇಟಿ ಕಾರ್ಯಕ್ರಮಕ್ಕೆ ಜನರಿಂದ ಉತ್ಸಾಹಭರಿತ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ 47% ಮನೆಗಳಿಗೆ ಭೇಟಿ ಕಾರ್ಯ ಮುಗಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದ್ದಾರೆ..

ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ 112 ತುರ್ತು ಸೇವೆ ಹಾಗೂ 1930 ಸೈಬರ್ ಕ್ರೈಂ ದೂರವಾಣಿ ಸಂಖ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ಜನರಿಗೆ ತಮ್ಮ ಸಮಸ್ಯೆಗಳನ್ನು ಪೊಲೀಸರಿಗೆ ಮನೆಯಿಂದಲೇ ತಿಳಿಸುವ ಆತ್ಮವಿಶ್ವಾಸ ಮೂಡುತ್ತಿದೆ ಎಂದು ಅವರು ತಿಳಿಸಿದರು.

ಮಾದಕ ವಸ್ತು ಸೇವನೆ ಅಥವಾ ಮಾರಾಟಕ್ಕೆ ಸಂಬAಧಿಸಿದ ಮಾಹಿತಿ ಒದಗಿಸಲು ವಿಶೇಷ ಕ್ಯೂಆರ್ ಕೋಡ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾಹಿತಿ ನೀಡುವವರ ವಿವರಗಳನ್ನು ಕಡ್ಡಾಯವಾಗಿ ಗೌಪ್ಯವಾಗಿಡಲಾಗುವುದು ಎಂದೂ ಎಸ್ಪಿ ಸ್ಪಷ್ಟಪಡಿಸಿದರು.

ಜನತೆ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಬೆಂಬಲ ನೀಡಿದರೆ, ಪೊಲೀಸ್-ಜನಸಂಪರ್ಕ ಬಲಪಡಿಸಲು ಇದು ದೊಡ್ಡ ವೇದಿಕೆಯಾಗಲಿದೆ ಎಂದು ಎಸ್ಪಿ ದೀಪನ್ ಹೇಳಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಮಹೇಶ್ ಎಂ.ಕೆ., ನಗರ ಹಾಗೂ ಗ್ರಾಮೀಣ ಸಿಪಿಐಗಳಾದ ದಿವಾಕರ ಪಿ.ಎಂ., ಮಂಜುನಾಥ ಲಿಂಗಾರೆಡ್ಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

About The Author

error: Content is protected !!