March 2, 2026

ಓಸಿ ಮಟ್ಕಾ ಜೂಗಾರಾಟದಲ್ಲಿ ತೊಡಗಿದ್ದ ವ್ಯಕ್ತಿ ಬಂಧನ

ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಓಸಿ ಮಟ್ಕಾ ಜೂಗಾರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಮುರ್ಡೇಶ್ವರ ಪೊಲೀಸರು ದಾಳಿ ನಡೆಸಿ ಸ್ಥಳದಲ್ಲೇ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬAಧಿತನನ್ನು ಶಿರಾಲಿಯ ಮೊಗೇರಕೇರಿಯ ಪರಮೇಶ್ವರ ಮಾಸ್ತಿ ಮೊಗೇರ್ ಎಂದು ಗುರುತಿಸಲಾಗಿದೆ. ಈತನು ಮಾವಿನಕಟ್ಟಾದ ಬೈರುಮನೆ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಬಿಳಿ ಚೀಟಿಯಲ್ಲಿ ಅಂಕೆ ಸಂಖ್ಯೆ ಬರೆದು ಓಸಿ ಮಟ್ಕಾ ಜೂಗಾರಾಟ ನಡೆಸುತ್ತಿದ್ದಾನೆಂಬ ಖಚಿತ ಮಾಹಿತಿಯ ಮೇರೆಗೆ ಪಿಎಸೈ ಹನುಮಂತ ಬಿರಾದಾರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು.

ದಾಳಿಯ ವೇಳೆ ಓಸಿ ಮಟ್ಕಾ ಚೀಟಿಗಳು ಹಾಗೂ ?510 ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

error: Content is protected !!