ಭಟ್ಕಳ: ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳು,10 – 40 ಶೇಕಡಾ ರಿಯಾಯಿತಿ! ಈ ಆಮಿಷದ ನುಡಿಗೆ ಜನರು ನಂಬಿ ಹಣ ಪಾವತಿಸಿದರೂ, ವಸ್ತು ಸಿಗದೇ ಈಗ ನಷ್ಟದಲ್ಲಿ ತಲೆ ಹಿಡಿದುಕೊಂಡಿದ್ದಾರೆ. ಜನರನ್ನು ಈ ರೀತಿಯಲ್ಲಿ ಮೋಸ ಮಾಡಿದ ಗ್ಲೋಬಲ್ ಎಂಟರ್ಪ್ರೈಸಸ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಕಾರ್ಸ್ಟ್ರೀಟ್ನ ಮಿಸ್ಥಾ ಟವರ್ ಎದುರಿನ ಕಟ್ಟಡದಲ್ಲಿ ಮೂವರು ವ್ಯಕ್ತಿಗಳು ಕಟ್ಟಡ ಮಾಲಕರ ಸಹಕಾರದಲ್ಲಿ ಅಂಗಡಿ ಆರಂಭಿಸಿದ್ದರು. ಜನರನ್ನು ರಿಯಾಯಿತಿ ಆಮಿಷದ ಮೂಲಕ ಸೆಳೆಯುವ ಇವರು ಮೊತ್ತವನ್ನು ಮುಂಗಡವಾಗಿ ಪಡೆದು ವಸ್ತು ನೀಡದೇ ಅಂಗಡಿ ಬಂದ ಮಾಡಿ ಪರಾರಿಯಾಗಿದ್ದಾರೆ.

ಪೀಡಿತರಲ್ಲಿ ಒಬ್ಬರಾದ ಮೊಹಮ್ಮದ್ ಸವೂದ್ (ತಂದೆ ಹಸನ್ ಶಬ್ಧರ್ ಮೋತ್ಯಶಾಮ್) ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ?84,270 ಮೊತ್ತ ಪಾವತಿಸಿ ವಸ್ತು ಬುಕ್ ಮಾಡಿಕೊಂಡಿದ್ದರೂ ಸಾಮಾನು ಸಿಕ್ಕಿಲ್ಲವೆಂದು ತಿಳಿಸಿದ್ದಾರೆ. ಇದೇ ರೀತಿಯಾಗಿ ಇನ್ನೂ ಹಲವರಿಂದ ಹಣ ಪಡೆದು ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರು, ಪ್ರಕರಣ ದಾಖಲಾಗಿದ್ದು, ಗೋಡೌನ್ ಸೀಜ್ ಮಾಡಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಸುಮಾರು 180 ಜನರು ಮೋಸಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಗ್ರಾಹಕರಿಂದ ಒಟ್ಟಾರೆ ರೂ 14 ಲಕ್ಷ ಠೇವಣಿ ಪಡೆದಿದ್ದಾರೆ ಎನ್ನಲಾಗಿದೆ. ತನಿಖೆ ಮುಂದುವರಿದಿದ್ದು, ಇನ್ನೂ ಯಾರಾದರೂ ವಂಚನೆಗೆ ಒಳಗಾದವರು ಇದ್ದರೆ ಮಾಹಿತಿ ನೀಡಿದಲ್ಲಿ ಅವರ ದೂರನ್ನೂ ಪ್ರಕರಣಕ್ಕೆ ಸೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪೊಲೀಸರು ಆರೋಪಿತರ ಪತ್ತೆಗೆ ಬಲೆ ಬೀಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ