December 23, 2025

ಭಗವಧ್ಗೀತಾ ಕಂಠ ಪಾಠ ಸ್ಪರ್ಧೆಯ ಲ್ಲಿ 5 ವಿದ್ಯಾರ್ಥಿಗಳ ಸಾಧನೆ:

ಹೊನ್ನಾವರ: ಭಟ್ಕಳ ಎಜುಕೇಷನ್ ಸೊಸೈಟಿಯ ಗಜಾನನ ಗಣಪತಿ ಕೊಲ್ಲೆ ರಾಯ್ಕರ್ ಫೌಂಡೇಷನ್ ಇವರ ಸಹಯೋಗದಲ್ಲಿ ನಡೆದ 5 ನೇ ವರ್ಷದ ಜಿಲ್ಲಾ ಮಟ್ಟದ ಭಗವದ್ಗೀತಾ ಕಂಠ ಪಾಠ ಸ್ಪರ್ಧೆಯಲ್ಲಿ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಎಂ. ಪಿ. ಇ. ಸೊಸೈಟಿಯ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿಗಳಾದ, ಶಾಂಭವಿ ಕೃಷ್ಣಮೂರ್ತಿ ಭಟ್ ಮತ್ತು ಶಾಂಭವಿ ವಸಂತ ಭಟ್ ಪ್ರಥಮ ಸ್ಥಾನವನ್ನು, ಶ್ರಾವ್ಯ ಮಹೇಶ ಹೆಗಡೆ, ಆರಾಧ್ಯ ಸಿ. ಎನ್., ಚಿನ್ಮಯಿ ಸಂದೇಶ ಭಟ್ ತೃತೀಯ ಸ್ಥಾನ ಪಡೆದಿದ್ದು, ಈ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!