March 2, 2026

ಪ್ರಗತಿ ಶಾಲೆಯಲ್ಲಿ ರಾಷ್ಟ್ರ ಕವಿ ಕುವೆಂಪು ಜನ್ಮದಿನಾಚರಣೆ

ಕೆ. ಆರ್ .ಪೇಟೆ: ಪಟ್ಟಣದ ಪ್ರಗತಿ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಹಾಗೂ ಲೇಖಕ ಕೆ .ಕಾಳೇಗೌಡ ವಹಿಸಿದ್ದರು .ಅವರು ಮಾತನಾಡಿ ಕುವೆಂಪು ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ನಾವು ರೂಡಿಸಿಕೊಂಡರೆ ಉತ್ತಮ ವ್ಯಕ್ತಿಗಳಲ್ಲಿ ಬದುಕಲು ಸಾಧ್ಯವಾಗುತ್ತದೆ ಮಾನವೀಯ ಮೌಲ್ಯಗಳನ್ನು ಅವರು ತಮ್ಮ ಸಾಹಿತ್ಯದಲ್ಲಿ ಈ ವಿವರಿಸಿದ್ದಾರೆ.

ಸಾಹಿತ್ಯದ ಧ್ರುವತಾರೆಯಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಕುಪ್ಪಳಿಯ ಕವಿಶೈಲದ ಶಿಖರಗಳ ನಡುವೆ, ಸಹ್ಯಾದ್ರಿಯ ತಂಪು ಗಾಳಿಯನ್ನು ಉಸಿರಾಡುತ್ತಾ ಬೆಳೆದ ಈ ಬಾಲಕನಿಗೆ ಪ್ರಕೃತಿಯೇ ಮೊದಲ ಗುರುವಾಗಿತ್ತು. ಮಲೆನಾಡಿನ ಕಾಡುಗಳು, ಝರಿಗಳು ಮತ್ತು ಬೆಟ್ಟಗುಡ್ಡಗಳು ಅವರ ರಕ್ತದಲ್ಲಿ ಕಾವ್ಯದ ಲಹರಿಯನ್ನು ಹರಿಸಿದವು.

ಬಾಲ್ಯದಿಂದಲೇ ತತ್ವಜ್ಞಾನ ಮತ್ತು ಸಾಹಿತ್ಯದ ಕಡೆಗೆ ಒಲವು ಹೊಂದಿದ್ದ ಇವರು, ಕನ್ನಡದ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸುವ ಮಹಾ ಸಂಕಲ್ಪದೊಂದಿಗೆ ಬೆಳೆದರು. ಇವರ ಜನ್ಮವು ಕೇವಲ ಒಂದು ಸಾಧಾರಣ ಘಟನೆಯಾಗಿರದೆ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಯುಗವೊಂದರ ಆರಂಭವಾಗಿತ್ತು.
ಮನುಕುಲದ ಮಹಾಮಂತ್ರ
ಕುವೆಂಪು ಅವರು ಜಗತ್ತಿಗೆ ನೀಡಿದ ‘ವಿಶ್ವಮಾನವ’ ತತ್ವವು ಕೇವಲ ಒಂದು ಸಿದ್ಧಾಂತವಲ್ಲ, ಅದು ಮನುಕುಲದ ಉದ್ಧಾರಕ್ಕೆ ನೀಡಿದ ಸಂಜೀವಿನಿ. ಮನುಷ್ಯನು ಹುಟ್ಟುವಾಗ ವಿಶ್ವಮಾನವನಾಗಿ ಜನ್ಮತಾಳುತ್ತಾನೆ, ಆದರೆ ಬೆಳೆಯುತ್ತಾ ಹೋದಂತೆ ಸಮಾಜವು ಅವನಿಗೆ ಜಾತಿ, ಮತ, ಪಂಥ ಮತ್ತು ಭಾಷೆಯೆಂಬ ಕಿರಿದಾದ ಗೋಡೆಗಳನ್ನು ಕಟ್ಟುತ್ತದೆ ಎಂದು ಕುವೆಂಪು ತೀವ್ರವಾಗಿ ಪ್ರತಿಪಾದಿಸಿದರು. “ಮನುಜಮತ ವಿಶ್ವಪಥ” ಎಂಬ ದಿವ್ಯ ಮಂತ್ರದ ಮೂಲಕ, ಮನುಷ್ಯನು ಈ ಎಲ್ಲಾ ಸಂಕೋಲೆಗಳನ್ನು ಕಳಚಿ ಎಸೆದು, ಬ್ರಹ್ಮಾಂಡದ ಒಂದು ಅವಿಭಾಜ್ಯ ಅಂಗವಾಗಿ ಬಾಳಬೇಕು ಎಂದು ಅವರು ಕರೆ ನೀಡಿದರು. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದ ಈ ಸಮಾಜದಲ್ಲಿ ವೈಷಮ್ಯಗಳನ್ನು ಮರೆತು, ಪ್ರೀತಿ ಮತ್ತು ಸೌಹಾರ್ದತೆಯಿಂದ ಬದುಕುವುದೇ ಧರ್ಮದ ನಿಜವಾದ ಸಾರವೆಂದು ಸಾರಿದರು. ಅವರ ಪಂಚಮಂತ್ರಗಳು ಮತ್ತು ದರ್ಶನವು ಮನುಷ್ಯನನ್ನು ಸಂಕುಚಿತ ಭಾವನೆಯಿಂದ ಮುಕ್ತಗೊಳಿಸಿ, ವಿಶಾಲವಾದ ವೈಚಾರಿಕತೆಯೆಡೆಗೆ ನಡೆಸುವಂತದ್ದಾಗಿದೆ. ಈ ಮಹಾನ್ ತತ್ವವು ಜಗತ್ತಿನ ಅಸಮಾನತೆಯನ್ನು ಹೋಗಲಾಡಿಸಿ, ಮಾನವೀಯತೆಯನ್ನು ಎತ್ತಿಹಿಡಿಯುವ ಒಂದು ಅಮರ ಸಂದೇಶವಾಗಿದೆ ಎಂದು ಕೆ ಕಾಳೇಗೌಡ ಹೇಳಿದರು.

ಹಿರಿಯ ಪತ್ರಕರ್ತರಾದ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಅವರು ಕುವೆಂಪುರವರ ಆದರ್ಶ ತತ್ವಗಳು ಇಂದಿಗೂ ಪ್ರಸ್ತುತವಾಗಿದೆ ಅವುಗಳನ್ನು ಅನುಸರಿಸಬೇಕು ಎಂದು ಹೇಳಿದರು. ನಿವೃತ್ತ ಕನ್ನಡ ಅಧ್ಯಾಪಕ ಕೆ. ಅಣ್ಣೇಗೌಡ ಪ್ರಧಾನ ಭಾಷಣಕಾರರಾಗಿ ಕುವೆಂಪು ಅವರನ್ನು ಕುರಿತು ಮಾತನಾಡಿದರು. ಅವರು ಕುವೆಂಪುರವರ ವಿವಿಧ ಸಾಹಿತ್ಯದ ಬಗ್ಗೆ ವಿವರಿಸಿದರು.

ಕುವೆಂಪುರವರು ಬರೆದ ಕಾವ್ಯಗಳು ಇಂದಿಗೂ ಪ್ರಸ್ತುತವಾಗಿದೆ. ರಾಮಾಯಣ ದರ್ಶನಂ ಕೃತಿ ಇಂದಿಗೂ ವಿಶ್ವ ಮಾನ್ಯತೆ ಪಡೆದಿದೆ. ಅವರಿಗೆ ನೊಬೆಲ್ ಪಾರಿತೋಷಕ ಸಿಗಬೇಕಾಗಿತ್ತು. ಅದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದರು.

ಕುವೆಂಪುರವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮೆಚ್ಚುವಂತದ್ದು ಎಂದು ಅವರು ಹೇಳಿದರು. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಅರ್ಚನಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗೋಪಾಲಕೃಷ್ಣ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಂದಿನಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರೌಢಶಾಲಾ ವಿದ್ಯಾರ್ಥಿನಿ ವರಲಕ್ಷ್ಮಿ ಸ್ವಾಗತಿಸಿದರು. ವಿದ್ಯಾರ್ಥಿನಿ ನಂದಿನಿ ವಂದಿಸಿದರು. ಕೆಎಂ ನಿತ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಕುವೆಂಪು ರಚಿತ ಕಾವ್ಯಗಳ ವಾಚನ ನಡೆಯಿತು.

About The Author

error: Content is protected !!