
ಹೊನ್ನಾವರ : ತಾಲೂಕಾ ಮಡಿವಾಳರ ಸಂಘದಿAದ ನಿರ್ಮಿಸಲಾದ ಸಮುದಾಯ ಭವನದ ಉದ್ಘಾಟಣಾ ಸಮಾರಂಭದಲ್ಲಿ ಚಿತ್ರದುರ್ಗದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳ ಜೊತೆ ಉದ್ಘಾಟಕರಾಗಿ ಬಂದ ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರು ಆಗಮಿಸಿದ್ದು ಸಣ್ಣ, ಹಿಂದುಳಿದ ಸಮುದಾಯವಾದರೂ ಅದ್ಭುತವಾಗಿ ಕಟ್ಟಿದ ಸಮುದಾಯ ಭವನ ನೋಡಿ ಸಂತೋಷ ವ್ಯಕ್ತಪಡಿಸಿದರು. ಸಮಾಜದ ಹಿತ ಚಿಂತಕರೂ ಆದ ಸಚಿವರು ಸ್ವಾಮಿಗಳ ಉಪಸ್ಥಿತಿಯಲ್ಲಿ ಮುಂದಿನ ಕಾಮಗಾರಿಗೆ ತನ್ನ ಸಹಕಾರ, ಸಹಾಯದ ಭರವಸೆ ನೀಡಿದ್ದರು. ನುಡಿದಂತೆ ನಡೆದ ಸಚಿವರು ಅವರ ಸಹಾಯ ಮತ್ತು ಸಹಕಾರಕ್ಕೆ ಹೊನ್ನಾವರ ತಾಲೂಕಾ ಮಡಿವಾಳರ ಸಂಘದ ಪದಾಧಿಕಾರಿಗಳು ಅವರ ನಿವಾಸಕ್ಕೆ ಹೋಗಿ ಅಭಿನಂದನೆ ಸಲ್ಲಿಸಿ ಸನ್ಮಾನಿದರು, ಸಂಘದ ಮುಂದಿನ ಯೋಜನೆಗಳಾದ ಬಡ ಮಕ್ಕಳ ವಸತಿನಿಲಯ ಕಾಮಗಾರಿಗೆ ಸಹಕಾರಕ್ಕೆ ಮನವಿ ಮಾಡಿದ್ದು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ಭರವಸೆ ಸಚಿವರು ನೀಡಿದ್ದಾರೆ.
ಆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕು. ಬೀನಾ ವೈದ್ಯ. ಸಹಕಾರ ನೀಡಿದ ರಾಜ್ಯ ಕಾಂಗ್ರೆಸ್ ಸಂಯೋಜನಾಧಿಕಾರಿ ನಾಗರಾಜ್ ಮಡಿವಾಳ ಸಿರ್ಸಿ, ಸಂಘದ ಪದಾಧಿಕಾರಿಗಳಾದ ಡಿ ಡಿ ಮಡಿವಾಳ, ಉಮೇಶ್ ಮಡಿವಾಳ, ಇಂಜಿನಿಯರ್ ಶಿವಾನಂದ್ ಹೊನ್ನಾವರ, ಸಂತೋಷ ಹೊನ್ನಾವರ, ವೆಂಕಟೇಶ್ ಮಡಿವಾಳ ಶಿಕ್ಷಕರು ಹಾಜರಿದ್ದರು.
More Stories
1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 17ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ ಸೆ.3 ರಂದು
ಹೊನ್ನಾವರ ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಚೌತಿ ದಿನದಂದು ಪ್ರತಿಷ್ಠಾಪಿಸಿದ ಗಣಪನನ್ನು ಶರಾವತಿ ನದಿಯಲ್ಲಿ ರವಿವಾರ ವಿಸರ್ಜಿಸಿದರು.
ತಾಲೂಕ ಮಟ್ಟದ ದಸರಾ ಕ್ರೀಡಾಕೂಟ