March 2, 2026

ಆನ್‌ಲೈನ್ ವಂಚನೆ – ₹1.55 ಲಕ್ಷ ಹಣ ವರ್ಗಾವಣೆ

ಭಟ್ಕಳ: ಭಟ್ಕಳ ವೆಂಕಟಾಪುರದ ಕೇನರಾ ಬ್ಯಾಂಕ್ ಖಾತೆದಾರರೊಬ್ಬರಿಗೆ ಆನ್‌ಲೈನ್ ವಂಚನೆಯಿಂದ ₹1.55 ಲಕ್ಷ ಹಣ ನಷ್ಟವಾದ ಘಟನೆ ವರದಿಯಾಗಿದೆ.

ಹೆಬಳೆ ಗಾಂಧಿನಗರ,ನಿವಾಸಿ
ತುಳಸಿದಾಸ ತಂದೆ ಮಾಸ್ತಿ ಮೊಗೇರ ಅವರು ಭಟ್ಕಳ ವೆಂಕಟಾಪುರದಲ್ಲಿರುವ ಕೇನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು,ಯಾರೋ ಅಪರಿಚಿತ ಆರೋಪಿತರು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಅವರ ಖಾತೆಯಿಂದ ಒಟ್ಟು ₹1,55,000/- ಹಣವನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಖಾತೆಯಲ್ಲಿ ಹಣ ಇಲ್ಲದಿರುವುದು ಗಮನಕ್ಕೆ ಬಂದ ತಕ್ಷಣ ಪೀಡಿತರು ಬ್ಯಾಂಕ್ ಹಾಗೂ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!