ಶಿರಸಿ : ಕರ್ನಾಟಕ ರಕ್ಷಣಾ ವೇದಿಕೆ ಶಿರಸಿ ಸಿದ್ದಾಪುರ ಘಟಕದ ವತಿಯಿಂದ ಸಿದ್ದಾಪುರ ತಾಲೂಕಿನ ಕೊಂಡ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಬರುವಂತ ಭಕ್ತಾದಿಗಳಿಗೆ ತಂಪು ಪಾನೀಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಿರಿಚಿಸಿದಪುರ ಘಟಕದ ಅಧ್ಯಕ್ಷರಾದ ಕಾರ್ತಿಕ್ ಅರಮನೆ
ನಾಗರಾಜ್ ಸಿದ್ದಾಪುರ ರಾಘು, ನಮನ್ ಜೋಗಿ, ಆನಂದ ದೊಡ್ಮನೆ, ಪ್ರತೀಕ್ ಉಪ್ಪೂರ್ ವೆಂಕಟೇಶ್ ನಾಯ್ಕ
ಚಂದ್ರು ಮಡಿವಾಳ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾರ್ತಿಕ್ ಅರಮನೆ ಮಾತನಾಡಿ ಮುಂದಿನ ದಿನಗಳಲ್ಲಿ ರಕ್ಷಣಾ ವೇದಿಕೆ ಶಿರಸಿ ಸಿದ್ದಾಪುರ ಘಟಕ ಸಾರ್ವಜನಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಾ ಸಮಾಜದ ಅಭಿವೃದ್ಧಿಯ ದಾರಿಯಲ್ಲಿ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.

ನಾಗರಾಜ್ ಸಿದ್ದಾಪುರ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಸಿರ್ಸಿ – ಸಿದ್ದಾಪುರ ಘಟಕದ ವತಿಯಿಂದ ಹಮ್ಮಿಕೊಂಡಿರುವಂತ ಈ ಕಾರ್ಯಕ್ರಮ ಅತಿ ಉತ್ತಮವಾಗಿದೆ ಮತ್ತು ಕಾರ್ತಿಕ್ ಅರಮನೆ ಅವರ ಪರಿಶ್ರಮ ಮತ್ತು ಉತ್ಸಾಹ ನಮ್ಮೆಲ್ಲ ಪದಾಧಿಕಾರಿಗಳು ಮಾಡುತ್ತಿರುವ ಸೇವೆ ಉತ್ತಮವಾಗಿದೆ ಮತ್ತು ಹೆಚ್ಚಿನ ಸೇವೆ ಕರ್ನಾಟಕ ರಕ್ಷಣಾ ವೇದಿಕೆ ಸಿರ್ಸಿ ಸಿದ್ದಾಪುರ ಘಟಕದಿಂದ ಆಗಲಿ ಎಂದು ಶುಭ ಹಾರೈಸಿದರು.

More Stories
ಜಾತ್ರಾ ಸಮಯದಲ್ಲಿ ಹೋಟೆಲ್ ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಸಕರಿಂದ ಸೂಚನೆ.
ಸಪ್ತಕದ 20 ವರ್ಷಗಳ ಸಾರ್ಥಕ ಪಯಣದ 950ನೇ ವಿಶೇಷ ಕಾರ್ಯಕ್ರಮ ಫೆ 28 ರಂದು ನವದೆಹಲಿಯಲ್ಲಿ
ದೇವಸ್ಥಾನದ ಮರುನಿರ್ಮಾಣಕ್ಕೆ ಬ್ಯಾಗದ್ದೆ ಊರಿನವರ ಜೊತೆ ಅನಂತಮೂರ್ತಿ ಸಂಕಲ್ಪ