
ಭಟ್ಕಳ: ಭಟ್ಕಳದ ಅಳ್ವೆಕೋಡಿ ಬಂದರಿಯಿAದ ಬುಧವಾರ ಮಧ್ಯಾಹ್ನ ಮೀನುಗಾರಿಕೆಗೆ ತೆರಳಿದ್ದ ಮಹಾಸತಿ ಎಂಬ ಗಿಲ್ನಟ್ ದೋಣಿ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ ದುರ್ಘಟನೆ ನಡೆದಿದೆ. ಘಟನೆಯ ವೇಳೆ ದೋಣಿಯಲ್ಲಿ ಇದ್ದ ನಾಲ್ವರು ಮೀನುಗಾರರಲ್ಲಿ ಒಬ್ಬರಾದ ರಾಮಕೃಷ್ಣ ಮಂಜು ಮೊಗೇರ ಅವರ ಶವವನ್ನು ಹೊನ್ನೆಗ್ಗದೆಯ ಸಮುದ್ರ ತೀರದಲ್ಲಿ ಪತ್ತೆಹಚ್ಚಲಾಗಿದೆ.


ಇನ್ನುಳಿದ ಮೂವರು ಸತೀಶ್ ಮೊಗೇರ, ಗಣೇಶ್ ಮೊಗೇರ ಹಾಗೂ ನಿಶ್ಚಿತ ಮೊಗೇರ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಜೋರಾಗಿದೆ. ಈ ಕಾರ್ಯದಲ್ಲಿ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಭದ್ರತಾ ಪಡೆ ತೊಡಗಿದ್ದಾರೆ.
ಈ ದುರ್ಘಟನೆ ಭಟ್ಕಳದ ಮೀನುಗಾರ ಸಮುದಾಯದಲ್ಲಿ ತೀವ್ರ ಬೇಸರ ಮತ್ತು ಆತಂಕವನ್ನು0ಟುಮಾಡಿದೆ.


More Stories
ಮಾರುಕೇರಿ ಹೂತ್ಕಳದ ಧನ್ವಂತರಿ ದೇವಾಲಯದಲ್ಲಿ ಜುಲೈ 25 ರಂದು ‘ಲಕ್ಷ ತುಳಸಿ ಅರ್ಚನೆ’ ಹಾಗೂ ‘ಸ್ವರ್ಣ ಪಾದುಕಾ ಭಿಕ್ಷೆ’
ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ‘ಕೃಷ್ಣ ಯಜುರ್ವೇದ ಸ್ವಾಹಾಕಾರ’ ಧಾರ್ಮಿಕ ಮಹೋತ್ಸವ ಸಂಪನ್ನ
ಸಾಧಕ ಭಟ್ಕಳ ತಾಲೂಕು ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಆಟೋ ಚಾಲಕರ-ಮಾಲಕರ ಸಂಘದಿಂದ ಸನ್ಮಾನ