
ಭಟ್ಕಳ: ಮುರುಡೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಚಂದಾವರದ ಪ್ರಕಾಶ ಡಿಯೋಗ ನರೋನಾ (33) ತಮಿಳುನಾಡಿನಿಂದ ಮರಳುತ್ತಿದ್ದು, ಮುರುಡೇಶ್ವರ ಬೈಲುರು ಕ್ರಾಸ್ ಹತ್ತಿರ ತಮ್ಮ ಇಕೊ ಕಾರನ್ನು ನಿಲ್ಲಿಸಿದ್ದರು. ಕಾರಿನಲ್ಲಿದ್ದ ಆಲನ್ ಸ್ಪ್ಯಾನಿ ಇಳಿಯುವ ವೇಳೆ, ಮುರುಡೇಶ್ವರದಿಂದ ಹೊನ್ನಾವರದ ಕಡೆಗೆ ಅತಿವೇಗದಲ್ಲಿ ಬರುತ್ತಿದ್ದ ಖಾಸಗಿ ಅಂಬುಲೆನ್ಸ್ ಕಾರಿಗೆ ಹಿಂಬದಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಆಲನ್ ಸ್ಪ್ಯಾನಿ ತಲೆಗೆ ಹಾಗೂ ಎಡ ಕೈ ಮಣಿಕಟ್ಟಿಗೆ ಗಾಯಗೊಂಡಿದ್ದಾರೆ. ಅಂಬುಲೆನ್ಸ್ ಹಿಂಬದಿ ಸವಾರ ಮಂಜುನಾಥ ಚಂದ್ರು ಗೌಡ (ಅಂಗಡಿಹಿತ್ತ, ಹೊನ್ನಾವರ) ತಲೆ, ಕೈಕಾಲುಗಳಿಗೆ ಗಾಯಗೊಂಡಿದ್ದಾರೆ. ಕಾರು ಮಾಲೀಕರಾದ ಪ್ರಕಾಶ ನರೋನಾ ಇವರಿಗೂ ಎರಡು ಕಾಲುಗಳಿಗೆ ಪೆಟ್ಟಾಗಿದೆ.
ಅಪಘಾತದಲ್ಲಿ ಇಕೊ ಕಾರಿಗೆ ಹಾನಿಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಬAಧ ಪ್ರಕಾಶ ನರೋನಾ ಅವರು ಅಂಬುಲೆನ್ಸ್ ಚಾಲಕ ಭರತ್ ಮಾದೇವ ಗೌಡ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
More Stories
ಮಗ್ದೂಮ್ ಕಾಲನಿಯ ಅರಣ್ಯ ಇಲಾಖೆಯ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ರಾಶಿ ಮೂಳೆ ಪತ್ತೆ ಸ್ಥಳೀಯರಲ್ಲಿ ಆಕ್ರೋಶ
ಆನಂದ್ ಆಶ್ರಮ ಕಾನ್ವೆಂಟ್ ಪ್ರೌಢಶಾಲೆ ಭಟ್ಕಳ. ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ.ತಾಲೂಕಾ ವೀರಾಗ್ರಣಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಮಾಜದಲ್ಲಿ ಹೆಚ್ಚಿನ ಗೌರವಕ್ಕೆ ಒಳಪಡುವ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ