ಭಟ್ಕಳ: ಮುರುಡೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಚಂದಾವರದ ಪ್ರಕಾಶ ಡಿಯೋಗ ನರೋನಾ (33) ತಮಿಳುನಾಡಿನಿಂದ ಮರಳುತ್ತಿದ್ದು, ಮುರುಡೇಶ್ವರ ಬೈಲುರು ಕ್ರಾಸ್ ಹತ್ತಿರ ತಮ್ಮ ಇಕೊ ಕಾರನ್ನು ನಿಲ್ಲಿಸಿದ್ದರು. ಕಾರಿನಲ್ಲಿದ್ದ ಆಲನ್ ಸ್ಪ್ಯಾನಿ ಇಳಿಯುವ ವೇಳೆ, ಮುರುಡೇಶ್ವರದಿಂದ ಹೊನ್ನಾವರದ ಕಡೆಗೆ ಅತಿವೇಗದಲ್ಲಿ ಬರುತ್ತಿದ್ದ ಖಾಸಗಿ ಅಂಬುಲೆನ್ಸ್ ಕಾರಿಗೆ ಹಿಂಬದಿ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಆಲನ್ ಸ್ಪ್ಯಾನಿ ತಲೆಗೆ ಹಾಗೂ ಎಡ ಕೈ ಮಣಿಕಟ್ಟಿಗೆ ಗಾಯಗೊಂಡಿದ್ದಾರೆ. ಅಂಬುಲೆನ್ಸ್ ಹಿಂಬದಿ ಸವಾರ ಮಂಜುನಾಥ ಚಂದ್ರು ಗೌಡ (ಅಂಗಡಿಹಿತ್ತ, ಹೊನ್ನಾವರ) ತಲೆ, ಕೈಕಾಲುಗಳಿಗೆ ಗಾಯಗೊಂಡಿದ್ದಾರೆ. ಕಾರು ಮಾಲೀಕರಾದ ಪ್ರಕಾಶ ನರೋನಾ ಇವರಿಗೂ ಎರಡು ಕಾಲುಗಳಿಗೆ ಪೆಟ್ಟಾಗಿದೆ.
ಅಪಘಾತದಲ್ಲಿ ಇಕೊ ಕಾರಿಗೆ ಹಾನಿಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಬAಧ ಪ್ರಕಾಶ ನರೋನಾ ಅವರು ಅಂಬುಲೆನ್ಸ್ ಚಾಲಕ ಭರತ್ ಮಾದೇವ ಗೌಡ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


More Stories
ಶ್ರೀ ಗುರುಸುಧೀಂದ್ರ ಕಾಲೇಜಿನಲ್ಲಿ B.Sc. ಕ್ರಿಮಿನಾಲಜಿ & ಫೋರೆನ್ಸಿಕ್ ಸೈನ್ಸ್ ಕೋರ್ಸ್ಗೆ ಚಾಲನೆ: ಎಸ್ಪಿ ದೀಪನ್ ಎಂ.ಎನ್. ಉದ್ಘಾಟನೆ
ಭಟ್ಕಳದಲ್ಲಿ ‘ಶೌರ್ಯ’ ವಿಪತ್ತು ನಿರ್ವಹಣಾ ಪಡೆಗೆ NDRF ನಿಂದ ತರಬೇತಿ ಕಾರ್ಯಕ್ರಮ
ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ತಪ್ಪಿಸಿರುವುದು ಜನರ ಧ್ವನಿಯನ್ನೇ ಕಟ್ಟಿಹಾಕಿದಂತೆ: ಮಂಕಿ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ನಾಯ್ಕ್ ಆಕ್ರೋಶ