
ಹೊನ್ನಾವರ : “ಕ್ಷಯ, ಹೆಚ್.ಐ.ವಿ ಯಂತಹ ಗಂಭಿರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೃಷ್ಠಿ ಸಂಸ್ಥೆಯಿAದ ಪೌಷ್ಠಿಕಾಂಶದ ಕಿಟ್ಗಳನ್ನು ನೀಡುತ್ತಿರುವುದು ಅನುಕರಣಿಯವಾಗಿದೆ” ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ರಾಜೇಶಕಿಣಿ ಹೇಳಿದರು.
ಅವರು ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಸೃಷ್ಠಿ ಸಂಸ್ಥೆಯವರು ನೀಡಿದ ನ್ಯೂಟ್ರೆಸನ್ ಕಿಟ್ಗಳನ್ನು ಕ್ಷಯರೋಗದ ಮೇಲ್ವಿಚಾರಕರಾದ ರಾಜಶೇಖರ ನಾಯ್ಕರವರಿಗೆ ಹಸ್ತಾಂತರಿಸಿ ಮಾತನಾಡಿದ್ದರು “ಕ್ಷಯ ರೋಗಿಗಳು ಆರರಿಂದ ಒಂಬತ್ತು ತಿಂಗಳವರೆಗೆ ಔಷಧೋಪಾಚಾರಗಳನ್ನು ಮಾಡಬೇಕಾಗಿದ್ದು ಆ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶÀಗಳ ಅಗತ್ಯವಿರುತ್ತದೆ. ಅಂತವರಿಗೆ ನ್ಯೂಟ್ರಸನ್ ಕಿಟ್ಗಳನ್ನು ನೀಡುವದರ ಮೂಲಕ ಸೃಷ್ಠಿ ಸಂಸ್ಥೆ ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಿದೆ” ಎಂದು ಹೇಳಿದರು.
ನ್ಯೂಟ್ರೆಸನ್ ಕಿಟ್ಗಳನ್ನು ಸ್ವೀಕರಿಸಿ ಮಾತನಾಡಿದ ಕ್ಷಯರೋಗ ಮೇಲ್ವಿಚಾರಕರಾದ ರಾಜಶೇಖರ ನಾಯ್ಕ“ ಸೃಷ್ಠಿ ಸಂಸ್ಥೆ ನೀಡಿದ ಈ ಕಿಟ್ಗಳನ್ನು ಕ್ಷಯ ರೋಗಿಗಳಿಗೆ ನೀಡುವದರ ಮೂಲಕ ಅವರ ದೈಹಿಕ ಆರೋಗ್ಯ ಉತ್ತಮಗೊಳಿಸಲಾಗುವುದು. ಸೃಷ್ಠಿ ಸಂಸ್ಥೆಯ ಈ ಕೊಡುಗೆಯಿಂದ ಆರೋಗ್ಯದ ತೊಂದರೆಯಲ್ಲಿರುವವರಿಗೆ ತುಂಬಾ ಅನೂಕೂಲವಾಗಲಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕಿನ ಆಯುಷ್ ವೈದ್ಯಾಧಿಕಾರಿಗಳಾದ ಡಾ|| ಗುರುದತ್ತ ಕುಲಕರ್ಣಿ, ಐಸಿಟಿಸಿ ಆಪ್ತಸಮಾಲೋಚರಾದ ವಿನಾಯಕ ಪಟಗಾರ, ಪ್ರಯೋಗ ಶಾಲಾ ತಂತ್ರಜ್ಷರಾದ ಉಮೇಶ ಕೆ, ರವಿ ನಾಯ್ಕ ಉಪಸ್ಥಿತರಿದ್ದರು.
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ