October 5, 2025

ಸುಪ್ರೀಂ ಕೊರ್ಟ ಆದೇಶ- ಅರಣ್ಯವಾಸಿಗಳಿಗೆ ಅತಂತ್ರದ ಭೀತಿ :ಒಕ್ಕಲೆಬ್ಬಿಸಲು ವಿಶೇಷ ತನಿಖಾ ತಂಡಕ್ಕೆ ಒಂದು ವರ್ಷ ಅವಧಿ ನಿಗಧಿ- ರವೀಂದ್ರ ನಾಯ್ಕ

ಶಿರಸಿ: ಸರ್ಕಾರದ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಅನಧೀಕೃತವಾಗಿ ಅರಣ್ಯೇತರ ಚಟುವಟಿಕೆಗೆ ಸ್ವಾಧೀನ ಪಡಿಸಿಕೊಂಡಿರುವ ಅರಣ್ಯ ಭೂಮಿಯನ್ನ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮತ್ತು ಸ್ವಾದೀನಕ್ಕೆ ಒಳಪಡಿಸಲು ಸುಪ್ರೀಂ ಕೊರ್ಟನ ನಿರ್ಧೇಶನದಂತೆ ರಾಜ್ಯ ಸರ್ಕಾರವು ವಿವಿಧ ಹಂತದ ವಿಶೇಷ ತನಿಖಾ ತಂಡ ರಚಿಸಿ ಸ್ವಾಧೀನ ಪಡಿಸಿಕೊಳ್ಳಲು ಒಂದು ವರ್ಷದ ಕಾಲಮಾನ ದಂಡ ನಿಗಧಿಗೊಳಿಸಿ ರಾಜ್ಯ ಸರ್ಕಾರ ನಿರ್ಧೇಶನ ಪ್ರಕಟಿಸಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ರಾಜ್ಯ ಸರ್ಕಾರದ ಅರಣ್ಯ, ಪರಿಸರ ವಿಜ್ಷಾನ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶೀಯಾದ ಬಿ. ಶಿವಕುಮಾರ್ ಅವರು ಸರ್ಕಾರದ ಸೆಪ್ಟೆಂಬರ್ 15 ರಂದು ಪ್ರಕಟಿಸಿದ ಸರ್ಕಾರದ ನಡವಳಿಕೆಯ ಪ್ರತಿಯನ್ನು ಇಂದು ಶಿರಸಿ ಅರಣ್ಯ ಭೂಮಿ ಕಾರ್ಯಾಲಯದಲ್ಲಿ ಅ. 4 ರಂದು ಜರುಗಲಿರುವ ಮೇಲ್ಮನವಿ ಅಭಿಯಾನದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸುಪ್ರಿಂ ಕೊರ್ಟ ಮೇ. 15 ರಂದು ಅರಣ್ಯ ಭೂಮಿಯನ್ನು ಹೊಂದಿರುವ ವ್ಯಯಕ್ತಿಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಕಾನೂನು ಬಾಹಿರವಾಗಿ ಸರ್ಕಾರದ ಪರವಾನಿಗೇ ಇಲ್ಲದೇ, ಸ್ವಾಧೀನ ಪಡಿಸಿಕೊಂಡಿರುವ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ತನಿಖಾ ತಂಡಕ್ಕೆ ಅಧಿಕಾರ ನೀಡಲಾಗಿದೆ. ಅಲ್ಲದೇ, ರಾಜ್ಯಸರ್ಕಾರವು ಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ವೆಚ್ಚವನ್ನು ವಸೂಲಿ ಮಾಡಲು ನಡವಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.


ಸುಪ್ರಿಂ ಕೊರ್ಟನಲ್ಲಿ ಟಿ.ಎನ್ ಗೋಧವರ್ಮನ್ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಅರಣ್ಯ ಭೂಮಿಯನ್ನು ಅರಣ್ಯ ಉದ್ದೇಶವನ್ನು ಹೊರತುಪಡಿಸಿ ಮಾನವ ಮತ್ತು ಸಂಸ್ಥೆಗಳ ಹಸ್ತಕ್ಷೇಪ ನಿಯಂತ್ರೀಸಲು ಆದೇಶ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾನೂನು ಸಲಹೆಗಾರರು ಉದಯ ನಾಯ್ಕ ವಕೀಲರು, ಕೃಷ್ಣ ಗೋವಿಂದ ಪೂಜಾರಿ ಉಲ್ಲಾಳ, ಮಹೇಶ ಮಂಜುನಾಥ ಮುಕ್ರಿ ಕಡಬಾಳ, ಗಣಪತಿ ತಿಮ್ಮಪ್ಪ ನಾಯ್ಕ ಕಾನಕೊಪ್ಪ, ಶಿಣ್ಣು ಸುಬ್ಬ ಗೌಡ ಕುದರಗೊಡ, ಕಿರಣ ಶಿವು ವಡ್ಡರ್ ಬೆಡಸಗಾಂವ್, ತಿಮ್ಮ ಸಣ್ಣು ಗೋಣಸರ, ವಿಜಯ ವಿಷ್ಣು ದೇವದಾಸ ಕಾರವಾರ, ಶೇಷ ನಾಯ್ಕ ಹುಲೇಕಲ್, ಅರವಿಂದ ನಾಗೆಕರ್ ಹಣಕೋಣ, ಪ್ರದೀಪ್ ಬಿ ನಾಯ್ಕ, ದೇವು ಗಾಂವAಕರ್ ಕಾರವಾರ, ಬಾಬು ಗಾವಂಕರ್ ಕಾರವಾರ, ನಾರಾಯಣ ಗಾಂವಕರ್ ಕಾರವಾರ, ರತ್ನಾಕರ ಅನಂತ ನಾಯ್ಕ , ವೆಂಕಟರಮಣ ಸುಬ್ಬ ಗೌಡ ಕುದ್ರಗೋಡ, ಮಂಜುನಾಥ ಸುಬ್ಬ ಗೌಡ ಶಿರಗುಳಿ, ಅಬ್ದುಲ್ ಹಕ್ ಆರೆಕೊಪ್ಪ, ಮುಂತಾದವರು ಉಪಸ್ಥಿತರಿದ್ದರು.

ವಿವಿಧ ತನಿಖಾ ತಂಡಗಳು:
ಅರಣ್ಯೇತರ ಚಟುವಟಿಕೆಗೆ ತನಿಖೆಮಾಡಿ ಸ್ವಾಧೀನ ಪಡಿಸಿಕೊಳ್ಳಲು ರಾಜ್ಯ ಮಟ್ಟದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪರಿಸರ ಇಲಾಖೆ ಇವರು ಮುಖ್ಯಸ್ಥರಾಗಿದ್ದು, ಸದಸ್ಯಯರಾಗಿ ಕಂದಾಯ, ಹಿರಿಯ ಅರಣ್ಯ ಅಧಿಕಾರಿಗಳು ಮತ್ತು ಭೂ ದಾಖಲೆಗಳ ಆಯುಕ್ತರುಗಳಿಂದ ಕೂಡಿದ ಆರು ಸದಸ್ಯ ಸಮಿತಿ ಒಳಗೊಂಡಿದ್ದು ಇರುತ್ತದೆ. ಅದರಂತೆ ಪ್ರಾಥಮಿಕ ಹಂತದ ತನಿಖೆಗೆ ಜಿಲ್ಲೆಯ
ಉಪ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆಗೊಂಡಿದ್ದು, ಕಾಲಮಿತಿಯಲ್ಲಿ ಕಾರ್ಯ ನಿರ್ವಹಿಸಲು ನಡವಳಿಕೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

About The Author

error: Content is protected !!