ಶಿರಸಿ : ಕರ್ನಾಟಕ ರಕ್ಷಣಾ ವೇದಿಕೆ ಶಿರಸಿ ಸಿದ್ದಾಪುರ ಘಟಕದ ವತಿಯಿಂದ ಸಿದ್ದಾಪುರ ತಾಲೂಕಿನ ಕೊಂಡ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಬರುವಂತ ಭಕ್ತಾದಿಗಳಿಗೆ ತಂಪು ಪಾನೀಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಿರಿಚಿಸಿದಪುರ ಘಟಕದ ಅಧ್ಯಕ್ಷರಾದ ಕಾರ್ತಿಕ್ ಅರಮನೆ
ನಾಗರಾಜ್ ಸಿದ್ದಾಪುರ ರಾಘು, ನಮನ್ ಜೋಗಿ, ಆನಂದ ದೊಡ್ಮನೆ, ಪ್ರತೀಕ್ ಉಪ್ಪೂರ್ ವೆಂಕಟೇಶ್ ನಾಯ್ಕ
ಚಂದ್ರು ಮಡಿವಾಳ ಇನ್ನಿತರರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕಾರ್ತಿಕ್ ಅರಮನೆ ಮಾತನಾಡಿ ಮುಂದಿನ ದಿನಗಳಲ್ಲಿ ರಕ್ಷಣಾ ವೇದಿಕೆ ಶಿರಸಿ ಸಿದ್ದಾಪುರ ಘಟಕ ಸಾರ್ವಜನಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಾ ಸಮಾಜದ ಅಭಿವೃದ್ಧಿಯ ದಾರಿಯಲ್ಲಿ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.

ನಾಗರಾಜ್ ಸಿದ್ದಾಪುರ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಸಿರ್ಸಿ – ಸಿದ್ದಾಪುರ ಘಟಕದ ವತಿಯಿಂದ ಹಮ್ಮಿಕೊಂಡಿರುವಂತ ಈ ಕಾರ್ಯಕ್ರಮ ಅತಿ ಉತ್ತಮವಾಗಿದೆ ಮತ್ತು ಕಾರ್ತಿಕ್ ಅರಮನೆ ಅವರ ಪರಿಶ್ರಮ ಮತ್ತು ಉತ್ಸಾಹ ನಮ್ಮೆಲ್ಲ ಪದಾಧಿಕಾರಿಗಳು ಮಾಡುತ್ತಿರುವ ಸೇವೆ ಉತ್ತಮವಾಗಿದೆ ಮತ್ತು ಹೆಚ್ಚಿನ ಸೇವೆ ಕರ್ನಾಟಕ ರಕ್ಷಣಾ ವೇದಿಕೆ ಸಿರ್ಸಿ ಸಿದ್ದಾಪುರ ಘಟಕದಿಂದ ಆಗಲಿ ಎಂದು ಶುಭ ಹಾರೈಸಿದರು.


More Stories
11 ವರ್ಷದ ಪೋರ ರಕ್ಷಿತ್ಗೆ ‘ಥಲಸೇಮಿಯಾ ಮೇಜರ್’ ಕಾಯಿಲೆ: ಜೀವ ಉಳಿಸಲು 45 ಲಕ್ಷ ರೂ.ಗಳ ತುರ್ತು ಅಗತ್ಯ – ನೆರವಿಗೆ ದಾನಿಗಳಲ್ಲಿ ಕಳಕಳಿ ಮನವಿ
ನುಡಿಗಿಂತ ನಡೆ ಎರಡು ಪಟ್ಟು ಮುಂದಿರಬೇಕು: ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಏಷ್ಯಾ ಪೆಸಿಫಿಕ್ ಯೋಗಕ್ಕೆ ಆಯ್ಕೆಯಾದ ನಂದನ್ ಭಟ್ಗೆ ಅನಂತಮೂರ್ತಿ ಹೆಗಡೆ ಪ್ರೋತ್ಸಾಹ, ನೆರವು