ಬೈಂದೂರು : ದಿನಾಂಕ 30/10/2025 ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಉಪ್ಪುಂದದ ಪ್ರಧಾನ ಕಛೇರಿಗೆ ತಮಿಳುನಾಡು ರಾಜ್ಯದ ಇಲಾಖಾ 25 ಲೆಕ್ಕಪರಿಶೋಧಕರ ಅಧ್ಯಯನ ತಂಡ ಭೇಟಿ ನೀಡಿದರು. ಸಂಘದ ವ್ಯವಹಾರ ಚಟುವಟಿಕೆಗಳ ವೈವಿದ್ದೀಕರಣ, ಕ್ರೆಡಿಟ್ ಮೊನಿಟರಿಂಗ್, ಕೃಷಿ ಸಾಲ, ವ್ಯವಹಾರಿಕ ಸಾಲ, ಸದಸ್ಯರೊಂದಿಗಿರುವ ವ್ಯವಹಾರಿಕ ವಿನಿಮಯ ಇನ್ನಿತರ ಕಾರ್ಯಚಟುವಟಿಕೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು ಹಾಗೂ ಸಂಘದ ಮುಂದಿನ ಯೋಜನೆಗಳ ಕಾರ್ಯವೈಕರಿಗಳ ಮಾಹಿತಿ ಪಡೆದುಕೊಂಡರು.
ಸAಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಮಾತನಾಡಿ, ಸಂಘವು ಸಾವಿರ ಕೋಟಿಗೂ ಮಿಕ್ಕಿ ವಹಿವಾಟು ನಡೆಸುತ್ತಿದ್ದು ಸಂಘದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಉತ್ತಮ ರೀತಿಯ ಸೇವೆಯನ್ನು ನೀಡುತ್ತಾ ಬಂದಿದೆ. ಸಂಘವು ಆರ್ಥಿಕ ವಹಿವಾಟಿನ ಜೊತೆಗೆ ರೈತರಿಗೆ ಬಲತುಂಬುವ ನಿಟ್ಟಿನಲ್ಲಿ ಹಾಗೂ ಯುವ ರೈತರನ್ನು ಹುಟ್ಟುಹಾಕುವ ನೆಲೆಯಲ್ಲಿ ಅವರ ಅಪೇಕ್ಷೆಯಂತೆ ಮಾಹಿತಿ ಕಾರ್ಯಗಾರ, ಪ್ರಾತ್ಯಕ್ಷಿತೆ, ಕೃಷಿ ಪೂರಕ ಉತ್ಪನ್ನಗಳು ಹಾಗೂ ಸಲಕರಣೆಗಳ ಒದಗಿಸುವಿಕೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಂಘದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ಗೊಬ್ಬರದಿಂದ ಚಿನ್ನದವರೆಗೆ ಎಲ್ಲಾ ಬಗೆಯ ರೈತೋಪಯೋಗಿ ವಸ್ತುಗಳ ಒದಗಿಸಿಕೊಡುವ ಯೋಜನೆಯಾದ ರೈತಸಿರಿ ಅಗ್ರಿಮಾಲ್ ಮೂಲಕ ಆರ್ಥಿಕ ವ್ಯವಹಾರ ವಿಸ್ತರಣೆ ಮಾಡಲಾಗುವುದು, ಪ್ರಸ್ತುತ ರೈತಸಿರಿ ಅಗಿಮಾಲ್ ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.
ನಬಾರ್ಡ ಡಿ.ಜಿ.ಎಮ್ (ಬರ್ಡ) ಶ್ರೀ ಬೈಧ್ಯನಾಥ ಸಿಂಗ್, ತಮಿಳುನಾಡು ರಾಜ್ಯದ ಇಲಾಖಾ ಲೆಕ್ಕಪರಿಶೋಧಕ ನಿರ್ದೇಶಕರಾದ ಶ್ರೀ ಎ. ಬಾಲಸುಂದರಮ್ ಇವರಿಗೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಬಾರ್ಡ(ಬರ್ಡ) ಆಡಳಿತ ಸಿಬ್ಬಂದಿ ಶ್ರೀ ಸತೀಶ್, ಪ್ರಧಾನ ಕಛೇರಿಯ ವ್ಯವಸ್ಥಾಪಕರಾದ ಎಚ್. ರಾಮ, ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಸಂಘದ ಸಿ.ಇ.ಒ ವಿಷ್ಣು ಆರ್ ಪೈ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು, ಭಾವನಾ ಟಿವಿ

More Stories
ಮಹತೋಭಾರ ಸೇನೇಶ್ವರ ದೇವಸ್ಥಾನ ಉತ್ಸವ ಮೂರ್ತಿ ವನಭೋಜನ
ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸಹರ್ಷರಿಗೆ ಶಾಲೆಯಲ್ಲಿ ಭವ್ಯ ಸ್ವಾಗತ
ವತ್ತಿನಕಟ್ಟೆ ಮಹಾಸತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ