March 2, 2026

ಉತ್ತರ ಕನ್ನಡ ಜಿಲ್ಲಾ ಮಟ್ಟದ ಕೆಪಿಸಿಸಿ ಹಿಂದುಳಿದ ವರ್ಗಗಳ ಜಾಗೃತಿ ಅಭಿಯಾನ ಉದ್ಘಾಟಿಸಿದ ಶಾಸಕ ಭೀಮಣ್ಣ ಟಿ ನಾಯ್ಕ

ಶಿರಸಿ ‘ ದಿನಾಂಕ 11-11-2025 ರಂದು ಶಿರಸಿ ಡಾ|| ಬಿ.ಆರ್.ಅಂಬೇಡ್ಕರ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಉ.ಕ. ಜಿಲ್ಲಾ ವಿಭಾಗದ ಸಂವಿಧಾನ ರಕ್ಷಾ ಅಭಿಯಾನ ಹಂತ1 ಕಾರ್ಯಕ್ರಮದ ಹಾಗೂ ಉತ್ತರಕನ್ನಡ ಜಿಲ್ಲಾ & ತಾಲೂಕ ನೂತನ ಪದಾಧಿಕಾರಿಗಳಿಗೆ ಅಧಿಕಾರ ಪತ್ರ ಹಸ್ತಾತರ ಸಮಾರಂಭವನ್ನು ಉದ್ಘಾಟಿಸಿ ಕಾಂಗ್ರೆಸ ಪಕ್ಷದ ಸಂಘಟನೆ ಎಲ್ಲಾ ಕಾರ್ಯಕರ್ತರ ಜವಾಬ್ದಾರಿಯಾಗಿದ್ದು ಎಲ್ಲರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು.

ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಬಾಲಚಂದ್ರ ನಾಯ್ಕರವರ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಅವರ ಪ್ರಯತ್ನಕ್ಕೆ ನನಗೆ ಹೆಮ್ಮೆಯಾಗಿದೆ. ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಮಟ್ಟದ ಹಿಂದುಳಿದ ವರ್ಗ ವಿಭಾಗದ ಪದಾಧಿಕಾರಿಗಳು ಅವರಿಗೆ ಸಹಕಾರ ನೀಡಿ ಹಿಂದುಳಿದ ವರ್ಗಗಳ ಸಂಘಟನೆ ಮತ್ತು ಪಕ್ಷವು ವಹಿಸುವ ಜವಾಬ್ದಾರಿಗಳನ್ನು ಕಾರ್ಯಗತ ಗೊಳಿಸುವಂತೆ ತಿಳಿಸಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಸಂಘಟನೆ ಬಗ್ಗೆ ಮಾತನಾಡಿದರು. ಸಂವಿಧಾನ ರಕ್ಷಾ ಅಭಿಯಾನದ ಉ.ಕ. ಉಸ್ತುವಾರಿಗಳು ಕೆ.ಪಿ.ಸಿ.ಸಿ. ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರು ಆದ ಶ್ರೀ ಬಿ. ಆರ್ ನಾಯ್ಕ ಸಂವಿಧಾನ ರಕ್ಷಾ ಅಭಿಯಾನದ ಕುರಿತು ಮಾತನಾಡಿದರು. ಕೆ.ಪಿ.ಸಿ.ಸಿ. ಸದಸ್ಯರು ಉತ್ತರಕನ್ನಡ ಓ.ಬಿ.ಸಿ. ವಾಯ್ಸ ಆಫ್-100 ಕಾರ್ಯಕ್ರಮ ಉಸ್ತುವಾರಿಗಳು ಆದ ದೀಪಕ ಪರ್ಮುಣಿ ಉಸ್ತುಪಾರಿಗಳು ಆದ Ã ದೀಪಕ ಪೆರ್ಮುದೆ ಮಂಗಳೂರು ಇವರು ವಾಯ್ಸ ಆಫ್ 100 ಕಾರ್ಯಕ್ರಮದ ಕುರಿತು ಮಾತನಾಡಿದರು.


ಓ.ಬಿ.ಸಿ. ರಾಜ್ಯ ಉಪಾಧ್ಯಕ್ಷರಾದ ಉಮಾಪತಿಯವರು ಓ.ಬಿ.ಸಿ. ಕಾರ್ಯಕ್ರಮದ ಬಗ್ಗೆ ಹಾಗೂ ಪಕ್ಷದ ಜವಾಬ್ದಾರಿ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ ಸಮಿತಿಯ ಅಧ್ಯಕ್ಷರಾದ ಸಾಯಿಗಾಂವಕರವರು ಈ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಂಗ್ರೆಸ ಪಕ್ಷದ ಎಲ್ಲಾ ವಿವಿಧ ಹಂತದ ಪದಾಧಿಕಾರಿಗಳು ಕಾರ್ಯಕರ್ತರು ಪಕ್ಷವು ವಹಿಸುವ ಜವಾಬ್ದಾರಿಗಳನ್ನು ನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಎಚ್ಚರಿಗೆ ನೀಡಿದರು.
ವೋಟಚೋರಿ ಸಹಿ ಸಂಗ್ರಹಣೆ ಕುರಿತು ವಿವರಣೆ ನೀಡಿದರು. ಈ ಮೊದಲು ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಸ್ಪೋಟದಿಂದ ಬಲಿಯಾದ || ಜನರಿಗೆ ಮತ್ತು ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮ ಪಂಚಾಯತದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ಮಹೇಶ ನಾಯ್ಕರವರ ಅಕಾಲಿಕ ಮರಣ ಹಾಗೂ ಕುಮಾರಿ ಗೀತಾ ಬೋವಿ, ಶಿರ್ಶಿ ತಾಲೂಕಿನ ಇಟಗುಳಿ ಗ್ರಾ.ಪಂದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಇವರ ಅಕಾಲಿಕೆ ಮರಣದ ಬಗ್ಗೆ ಒಂದು ನಿಮಿಷ ಮೌನಾಚರಣೆ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಓ.ಬಿ.ಸಿ. ಹಾಗೂ ವೋಟಚೋರಿ ಬಗ್ಗೆ ವಿಡಿಯೋ ಕ್ಲಿಪ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಎ.ಐ.ಸಿ.ಸಿ. ಹಿಂದುಳಿದ ವರ್ಗಗಳ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ಶ್ರೀ ನಾಗರಾಜ ನಾರ್ವೆಕರ ಹೊನ್ನಾವರ ಬ್ಲಾಕ್ ಅಧ್ಯಕ್ಷರಾದ ಮಹೇಶ ನಾಯ್ಕ ವಿವಿಧ ಬ್ಲಾಕ್ ಅಧ್ಯಕ್ಷರು

ಒಬಿಸಿಯ ಮಂಕಿ ಬ್ಲ್ಯಾಕ್‌ನ ಅಧ್ಯಕ್ಷರಾದ ರಾಜು ನಾಯಕ್ ಒಬಿಸಿ ಹೊನ್ನಾವರ ಬ್ಲಾಕ್ ಅಧ್ಯಕ್ಷರಾದ ಕೃಷ್ಣ ಗಣಪ ಗೌಡ ಹಾಜರಿದ್ದರು, ಜಿಲ್ಲಾ ಮಟ್ಟದ 14 ಬ್ಲಾಕನ ಒಬಿಸಿಯ ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಒಬಿಸಿ ಜಿಲ್ಲಾಧ್ಯಕ್ಷರಾದ ಬಾಲಚಂದ್ರ ನಾಯ್ಕ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಹಾಗೂ ಒಬಿಸಿ ಕರ್ತವ್ಯ ಹಾಗೂ ತಾನು ಮುಂದೆ ಪಕ್ಷದ ಹಾಗೂ ಒಬಿಸಿ ಜವಾಬ್ದಾರಿ ಹಾಗೂ ತಾನು ಅಧ್ಯಕ್ಷನಾಗಿ ಕೈಗೊಳ್ಳಬೇಕಾದ ಕಾಯ್ಕçಮದ ಬಗ್ಗೆ ಮಾಹಿತಿ ನೀಡುತ್ತ ಪ್ರತಿ ಬೂಟ್ ಮಟ್ಟದಲ್ಲಿ ಐದು ಜನ ಕಾರ್ಯಕರ್ತರ ತಂಡವನ್ನು ರಚಿಸಿ ಪಂಚಪವರ್ ಬೂತ್ ಎಂಬ ನಾಮದೇಯದೊಂದಿಗೆ ಬೂತ್ ಮಟ್ಟದಲ್ಲಿ ಸಂಘಟಿಸಿ ಸರಕಾರದ ಐದು ಗ್ಯಾರಂಟಿಗಳ ಬಗ್ಗೆ ಸರಕಾರದ ಸೌಲತ್ತುಗಳ ಬಗ್ಗೆ ಒಬಿಸಿಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಒದಗಿಸುವ ಬಗ್ಗೆ ತಂಡ ರಚಿಸಲಾಗುತ್ತಿದೆ ಹಾಗೂ 14 ಬ್ಲಾಕ್ ಗಳ ತಾಲೂಕು ಸಮಿತಿಗಳನ್ನು ರಚಿಸಿ ಓಬಿಸಿಯ ಎಲ್ಲಾ ಪದಾಧಿಕಾರಿಗಳಿಗೆ ಕಾರ್ಯಗಾರವನ್ನು ಏರ್ಪಡಿಸಿ ಅವರಿಗೆ ಸಂಘಟ್ತರನ್ನಾಗಿ ಮಾಡುವ ಉದ್ದೇಶವಿದೆ ಎಂದು ಪ್ರಸ್ತಾವಿಕ ಮಾತನಾಡಿದರು.

ಶಿರಸಿ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಗೀತಾ ಶೆಟ್ಟಿ, ಕಿಸಾನ್ ಸೆಲ್‌ನ ಜಿಲ್ಲಾಧ್ಯಕ್ಷರಾದ ನಟರಾಜ್ ಬಿ ಹೊಸರು, ಬ್ಲಾಕ್ ಅಧ್ಯಕ್ಷರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಜಿಲ್ಲಾ ಮತ್ತು ತಾಲೂಕು ಮುಖಂಡರುಗಳು ಪದಾಧಿಕಾರಿಗಳು ಹಾಜರಿದ್ದರು ಕರ್ನಾಟಕ ಸುಧಾರಣಾ ಆಯೋಗದ ಅಧ್ಯಕ್ಷರು ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ವಿ ದೇಶಪಾಂಡೆ ಅವರು ಯುವಜನರು ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳಲ್ಲಿ ಜಾಗೃತಿಯನ್ನು ವಿಸ್ತರಿಸಲು ಈ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಲಿ ಎಂದು ಶುಭ ಸಂದೇಶ ರವಾನಿಸಿದ್ದಾರೆ.

ಒಬಿಸಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸೋಮ ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು ಸೋಶಿಯಲ್ ಮೀಡಿಯಾದ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ವಂದಿಸಿದರು, ಸರೋಜಾ ಮೆಲೋಡಿಸ್ ತಂಡ ಸಿರ್ಸಿ ಅವರಿಂದ ಸ್ವಾಗತ ಗೀತೆ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಂಪನ್ನಗೊAಡಿತು, ಕಾರ್ಯಕ್ರಮದಲ್ಲಿ ಅಂದಾಜು 1,200 ಕಾರ್ಯಕರ್ತರು ಹಾಜರಿದ್ದು ಅವರಿಗೆಲ್ಲ ಮಧ್ಯಾಹ್ನ ಬೋಜನದ ವ್ಯವಸ್ಥೆ ಮಾಡಲಾಗಿತ್ತು ಕಾರ್ಯಕ್ರಮ ನಂತರ ಜಿಲ್ಲಾಧ್ಯಕ್ಷರಾದ ಬಾಲಚಂದ್ರ ನಾಯ್ಕ ಅವರು ಸಭೆ ಮಾಡಿ ಅವರಿಗೆ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು ಈ ಕಾರ್ಯಕ್ರಮವು ಕಾಂಗ್ರೆಸ್ ಪಕ್ಷದ ಹಾಗೂ ಒಪಿಸಿಯ ಎಲ್ಲಾ ಪದಾಧಿಗಳಿಗೆ ಹೊಸ ಚೈತನ್ಯ ಮೂಡಿಸಿತು.

About The Author

error: Content is protected !!