ಭಟ್ಕಳ: ಯಾವುದೇ ಪರವಾನಿಗೆ ಇಲ್ಲದೇ ಕ್ರೂರಿಯಾಗಿ ಕಟ್ಟಿ ಎತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಭಟ್ಕಳ ತೆಂಗಿನಗು0ಡಿ ಕ್ರಾಸ್ ಬಳಿ ನಡೆದಿದೆ.

ಬಂಧಿತರನ್ನು ಅಪ್ಪಲ್ ಅಲಿ ಆಜಾದ್ ನಗರ-ಭಟ್ಕಳ, ಶಂಭುಲಿAಗಯ್ಯ ಹಿರೆಮಠ ಬ್ಯಾಡಗಿ-ಹಾವೇರಿ, ಸಂತೋಷ ಬೊರಾತ್ ಗುತ್ತಲ್-ಹಾವೇರಿ ಮತ್ತು ದೇವರಾಜ ದಿಡಗೂರ-ಹಾವೇರಿ ಎಂದು ಗುರುತಿಸಲಾಗಿದೆ. .
ಮಲ್ಲಿಕಾರ್ಜುನ ಶಿವಪ್ಪ ಕಡ್ಲಿ ಅಗಡಿ-ಹಾವೇರಿ ಇವರ ಹೆಸರಿನ ಲಾರಿಯಲ್ಲಿ ಸುಮಾರು ರೂ 5 ಲಕ್ಷ ಮೌಲ್ಯದ 10 ಎತ್ತುಗಳನ್ನು ಹತ್ಯೆ ಉದ್ದೇಶಕ್ಕೆ ಸಾಗಿಸಲಾಗುತಿತ್ತು ಎಂದು ತಿಳಿದುಬಂದಿದೆ. ವಾಹನದ ಬಳಿ ಯಾವುದಾದರೂ ಪರವಾನಿಗೆ, ಪಾಸ್ ಅಥವಾ ದಾಖಲೆಗಳು ಇರದೇ ಇರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ನಡೆದ ದಾಳಿಯಲ್ಲಿ ಪೊಲೀಸರು 10 ಎತ್ತು ಹಾಗೂ ರೂ 15 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.

More Stories
ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ನಾಯ್ಕ ಅವಿರೋಧವಾಗಿ ಆಯ್ಕೆ
ಶ್ರೀವಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ