ಭಟ್ಕಳ: ತಲಾಂದ ರಸ್ತೆಯ ಹೊಸಮಠ ಗದ್ದೆ ಸಮೀಪ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಬೈಕ್ ಏಕಾಏಕಿ ಕಾಡುಹಂದಿ ರಸ್ತೆ ದಾಟಲು ಬಂದ ಹಿನ್ನೆಲೆಯಲ್ಲಿ ಸ್ಕಿಡ್ ಆಗಿ ಉರುಳಿದ ಘಟನೆ ನಡೆದಿದೆ. ಬೈಕ್ ಸವಾರ ಮಹೇಶ ತಂದೆ ವೆಂಕಟೇಶ ಗೊಂಡ ಮತ್ತು ಹಿಂಬದಿ ಸವಾರ ರಿತೇಶ ತಂದೆ ಬಡಿಯಾ ಗೊಂಡ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಹಿಂಬದಿ ಸವಾರ ರಿತೇಶ ಅವರಿಗೆ ತಲೆಯ ಹಿಂಭಾಗ, ಬಲಗಣ್ಣು, ಬಲಗೈ ಹಾಗೂ ಬಲಗಾಲಿಗೆ ಗಾಯಗಳಾಗಿದ್ದು, ಬೈಕ್ ಸವಾರ ಮಹೇಶ ಅವರಿಗೆ ತಲೆಯ ಹಿಂಭಾಗ, ಬಲಗೈ ಮೊಣಕೈ ಭಾಗ ಹಾಗೂ ಎರಡೂ ಕಾಲಿನ ಪಾದಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಯೋಗೇಶ ತಂದೆ ಕುಪ್ಪಯ್ಯ ಗೊಂಡ ಅವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಮೋಟಾರ್ಸೈಕಲ್ ಸವಾರನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ