March 2, 2026

ಪ್ರತಿಭಾಕಾರಂಜಿ: ಶ್ರೀವಲಿ ಪ್ರೌಢಶಾಲೆಯ ಸುದೀಪ್ ಆಚಾರಿ ರಾಜ್ಯ ಮಟ್ಟಕ್ಕೆ

ಭಟ್ಕಳ: ಅಂಕೋಲಾದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ಭಟ್ಕಳದ ಶ್ರೀವಲಿ ಪ್ರೌಢಶಾಲೆ, ಚಿತ್ರಾಪುರ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಗಝಲ್ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಸುದೀಪ್ ರಾಜೇಶ್ ಆಚಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸಂಹಿತಾ ನವೀನ್ ಕಂಬದ ಕೋಣೆ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.


ಗಝಲ್ ವಿಭಾಗಕ್ಕೆ ಶ್ರೀಮತಿ ಧನ್ಯವತಿರಾವ್, ಹಿಂದಿ ಭಾಷಣ ವಿಭಾಗಕ್ಕೆ ಶ್ರೀಮತಿ ಕಾಂಚನ ಮೇಸ್ತಾ ಅವರು ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶ್ರೀವಲಿ ಟ್ರಸ್ಟ್‌ನ ಶೈಕ್ಷಣಿಕ ಸಲಹೆಗಾರರಾದ ಡಾ. ರವೀಂದ್ರ ಕೈಕಿಣಿ, ಎಂ.ಟಿ. ಗೌಡ, ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ ಭಟ್ಕಳ, ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಹಾಗೂ ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

About The Author

error: Content is protected !!