March 1, 2026

ಮಾವಳ್ಳಿ–೨ ಹೋಬಳಿಯ ಗ್ರಾಮ ಸಹಾಯಕ ಕೃಷ್ಣ ದೇವಡಿಗ ನಿಧನ

೩೨ ವರ್ಷ ಸೇವೆ ಸಲ್ಲಿಸಿದ ಗ್ರಾಮ ಸಹಾಯಕ ಕೃಷ್ಣ ದೇವಡಿಗ ಅಗಲಿಕೆ

ಭಟ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಾವಳ್ಳಿ–೨ ಹೋಬಳಿಯ ಗ್ರಾಮ ಸಹಾಯಕ ಕೃಷ್ಣ ಅನಂತ ದೇವಡಿಗ (೫೨) ಅವರು ಭಾನುವಾರ ನಿಧನರಾದರು.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಕಳೆದ ೩೨ ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ಅವರು, ಕರ್ತವ್ಯನಿಷ್ಠೆ ಮತ್ತು ಜನಸೇವೆಯ ಮೂಲಕ ಜನಮನ್ನಣೆ ಗಳಿಸಿದ್ದರು.
ಅಂತಿಮ ದರ್ಶನಕ್ಕೆ ನಾಗೇಂದ್ರ ಕೋಳಶೆಟ್ಟಿ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಸಹಾಯಕ ಸಂಘದ ಪ್ರಮುಖರಾದ ಮಾಸ್ತಯ್ಯ ನಾಯ್ಕ, ನಾಗಪ್ಪ ನಾಯ್ಕ ಹಾಗೂ ಸಹೋದ್ಯೋಗಿಗಳು ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು.

About The Author

error: Content is protected !!