March 1, 2026

ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ

ಹೊನ್ನಾವರ: ರಾಜ್ಯ ಆಡಳಿತ ಸುಧಾರಣ ಆಯೊಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭೇಟಿಯಾದರು. ದೇಶಪಾಂಡೆ ಅವರು ಸಾರ್ವಜನಿಕರಿಂದ ವಿವಿಧ ಅಹವಾಲುಗಳನ್ನು ಸ್ವೀಕರಿಸಿದರು.


ಕಾರ್ಯಕರ್ತರಿಗೆ ಪಕ್ಷದ ಸಂಘಟನೆ ಮಾಡುವಂತೆ ದೇಶಪಾಂಡೆ ಸೂಚಿಸಿದರು. ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಹೇಳಿದರು.
ಈ ಸಮಯದಲ್ಲಿ ಬ್ಲಾಕ್ ಅಧ್ಯಕ್ಷ ಮಹೇಶ್ ನಾಯ್ಕ, ಕೆ.ಪಿ.ಸಿ.ಸಿ ಸದಸ್ಯ ಎಂ.ಎನ್ ಸುಬ್ರಹ್ಮಣ್ಯ, ಸುಷ್ಮಾ ರೆಡ್ಡಿ, ಜಗದೀಪ್ ತಂಗೇರಿ, ವಿನೋದ್ ನಾಯ್ಕ ಕರ್ಕಿ, ಅಭೀಜಿತ್ ತಾಂಡೇಲ್, ರವೀಂದ್ರ ನಾಯ್ಕ, ಲಂಬೋಧರ ನಾಯ್ಕ, ಶ್ರೀಕಾಂತ ಮೇಸ್ತ, ಕೃಷ್ಣ ಮಾರಿಮನೆ, ಕೃಷ್ಣ ಹರಿಜನ, ಗೋವಿಂದ ಮುಕ್ರಿ, ಮಂಜು ಮುಕ್ರಿ, ಕೇಶವ ತಾಂಡೇಲ್, ಸುರೇಶ್ ಶಿವ ಮೇಸ್ತ, ಸುರೇಶ್ ರುಕ್ಕು ಮೇಸ್ತ, ಆಗ್ನೇಲ್ ಡಯಸ್, ನೆಲ್ಸನ್ ರೊಡ್ರಗಿಸ್, ವಾಸುದೇವ ಪುಲ್ಕರ್, ಜೋತಿ ಮಹಾಲೆ, ಶೇಖರ ಚಾರೋಡಿ, ಲಕ್ಷ್ಮಿ ಗೊಂಡ, ಮಂಜುಳಾ ನಾಯ್ಕ, ಕಲ್ಪನಾ ನರೋನಾ, ಸಾಲ್ಕೊಡ್ ನಾಗೇಶ ನಾಯ್ಕ, ಜಿಕ್ರಿಯಾ ಶೇಖ್, ಹನಿಫ್ ಶೇಖ್, ಪಾತ್ರೋನ್ ಫರ್ನಾಂಡಿಸ್, ಮಾದೇವ್ ನಾಯ್ಕ ಕರ್ಕಿ, ಹರಿಶ್ಚಂದ್ರ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ ; ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!