ಭಟ್ಕಳ: ಮುರುಡೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಚಂದಾವರದ ಪ್ರಕಾಶ ಡಿಯೋಗ ನರೋನಾ (33) ತಮಿಳುನಾಡಿನಿಂದ ಮರಳುತ್ತಿದ್ದು, ಮುರುಡೇಶ್ವರ ಬೈಲುರು ಕ್ರಾಸ್ ಹತ್ತಿರ ತಮ್ಮ ಇಕೊ ಕಾರನ್ನು ನಿಲ್ಲಿಸಿದ್ದರು. ಕಾರಿನಲ್ಲಿದ್ದ ಆಲನ್ ಸ್ಪ್ಯಾನಿ ಇಳಿಯುವ ವೇಳೆ, ಮುರುಡೇಶ್ವರದಿಂದ ಹೊನ್ನಾವರದ ಕಡೆಗೆ ಅತಿವೇಗದಲ್ಲಿ ಬರುತ್ತಿದ್ದ ಖಾಸಗಿ ಅಂಬುಲೆನ್ಸ್ ಕಾರಿಗೆ ಹಿಂಬದಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಆಲನ್ ಸ್ಪ್ಯಾನಿ ತಲೆಗೆ ಹಾಗೂ ಎಡ ಕೈ ಮಣಿಕಟ್ಟಿಗೆ ಗಾಯಗೊಂಡಿದ್ದಾರೆ. ಅಂಬುಲೆನ್ಸ್ ಹಿಂಬದಿ ಸವಾರ ಮಂಜುನಾಥ ಚಂದ್ರು ಗೌಡ (ಅಂಗಡಿಹಿತ್ತ, ಹೊನ್ನಾವರ) ತಲೆ, ಕೈಕಾಲುಗಳಿಗೆ ಗಾಯಗೊಂಡಿದ್ದಾರೆ. ಕಾರು ಮಾಲೀಕರಾದ ಪ್ರಕಾಶ ನರೋನಾ ಇವರಿಗೂ ಎರಡು ಕಾಲುಗಳಿಗೆ ಪೆಟ್ಟಾಗಿದೆ.
ಅಪಘಾತದಲ್ಲಿ ಇಕೊ ಕಾರಿಗೆ ಹಾನಿಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಬAಧ ಪ್ರಕಾಶ ನರೋನಾ ಅವರು ಅಂಬುಲೆನ್ಸ್ ಚಾಲಕ ಭರತ್ ಮಾದೇವ ಗೌಡ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
About The Author


More Stories
AITM ಭಟ್ಕಳದಲ್ಲಿ IPR ಮತ್ತು ಪೇಟೆಂಟ್ಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರ
ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು
ಯಶಸ್ವಿಯಾಗಿ ನಡೆದ ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ: ಜನತಾ ವಿದ್ಯಾಲಯ ಸಮಗ್ರ ವೀರಾಗ್ರಣಿ