ಭಟ್ಕಳ: ಮುರುಡೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಚಂದಾವರದ ಪ್ರಕಾಶ ಡಿಯೋಗ ನರೋನಾ (33) ತಮಿಳುನಾಡಿನಿಂದ ಮರಳುತ್ತಿದ್ದು, ಮುರುಡೇಶ್ವರ ಬೈಲುರು ಕ್ರಾಸ್ ಹತ್ತಿರ ತಮ್ಮ ಇಕೊ ಕಾರನ್ನು ನಿಲ್ಲಿಸಿದ್ದರು. ಕಾರಿನಲ್ಲಿದ್ದ ಆಲನ್ ಸ್ಪ್ಯಾನಿ ಇಳಿಯುವ ವೇಳೆ, ಮುರುಡೇಶ್ವರದಿಂದ ಹೊನ್ನಾವರದ ಕಡೆಗೆ ಅತಿವೇಗದಲ್ಲಿ ಬರುತ್ತಿದ್ದ ಖಾಸಗಿ ಅಂಬುಲೆನ್ಸ್ ಕಾರಿಗೆ ಹಿಂಬದಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಆಲನ್ ಸ್ಪ್ಯಾನಿ ತಲೆಗೆ ಹಾಗೂ ಎಡ ಕೈ ಮಣಿಕಟ್ಟಿಗೆ ಗಾಯಗೊಂಡಿದ್ದಾರೆ. ಅಂಬುಲೆನ್ಸ್ ಹಿಂಬದಿ ಸವಾರ ಮಂಜುನಾಥ ಚಂದ್ರು ಗೌಡ (ಅಂಗಡಿಹಿತ್ತ, ಹೊನ್ನಾವರ) ತಲೆ, ಕೈಕಾಲುಗಳಿಗೆ ಗಾಯಗೊಂಡಿದ್ದಾರೆ. ಕಾರು ಮಾಲೀಕರಾದ ಪ್ರಕಾಶ ನರೋನಾ ಇವರಿಗೂ ಎರಡು ಕಾಲುಗಳಿಗೆ ಪೆಟ್ಟಾಗಿದೆ.
ಅಪಘಾತದಲ್ಲಿ ಇಕೊ ಕಾರಿಗೆ ಹಾನಿಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಬAಧ ಪ್ರಕಾಶ ನರೋನಾ ಅವರು ಅಂಬುಲೆನ್ಸ್ ಚಾಲಕ ಭರತ್ ಮಾದೇವ ಗೌಡ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ