ಭಟ್ಕಳ: ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ನಡೆದ ದಾಳಿಯಲ್ಲಿ ಇಬ್ಬರು ಓ.ಸಿ. ಮಟಕಾ ಬುಕ್ಕಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.


ಮೊದಲು ಘಟನೆಯಲ್ಲಿ ಸರ್ಪನಕಟ್ಟಾ ಕೋಣಾರ ರಸ್ತೆಯಲ್ಲಿರುವ ಮಾಡರ್ನ್ ಪೇಂಟಿAಗ್ ಅಂಗಡಿ ಎದುರು ಸಾರ್ವಜನಿಕ ಸ್ಥಳದಲ್ಲಿ ಓ.ಸಿ. ಜೂಜಾಟ ನಡೆಸುತ್ತಿದ್ದ ಗಣಪತಿ ತಂದೆ ದೇವೇಂದ್ರ ನಾಯ್ಕ ತಲಾಂದ ಹಾಗೂ ಬುಕ್ಕಿ ಅಶೋಕ ತಂದೆ ನಾರಾಯಣ ನಾಯ್ಕ ಯಲ್ವಡಿಕವೂರ ಬಂಧಿತರಾಗಿದ್ದಾರೆ. ಅವರಿಂದ ರೂ.640 ನಗದು ಹಾಗೂ ಓ.ಸಿ. ಚೀಟಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.


ಇನ್ನೊಂದು ಘಟನೆಯಲ್ಲಿ ಶಿರಾಲಿ ಜಂಕ್ಷನ್ ರಸ್ತೆಯಲ್ಲಿ ಇದೇ ರೀತಿಯ ಜೂಜಾಟ ನಡೆಸುತ್ತಿದ್ದ ಜಯರಾಜ ತಂದೆ ಮಂಜುನಾಥ ಮೊಗೇರ್ (ಶಿರಾಲಿ ಅಳ್ವೆಕೊಡಿ) ಹಾಗೂ ಬುಕ್ಕಿ ದೇವೇಂದ್ರ ತಂದೆ ಮಂಜುನಾಥ ನಾಯ್ಕ (ಶಿರಾಲಿ ಅಳ್ವೆಕೊಡಿ) ಬಂಧಿತರಾಗಿದ್ದು, ಅವರಿಂದ ರೂ. 440 ನಗದು ಹಾಗೂ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಅಂಗಾರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ