ಹೊನ್ನಾವರ: ಮನುಷ್ಯನಜೀವನದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮಾಡುವ ಸಮಾಜಸೇವೆ ಬದುಕಿನುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ. ಸೇವೆಯಿಂದದೊರೆಯುವ ಸಂತೃಪ್ತಿಎಲ್ಲದಕ್ಕಿAತದೊಡ್ಡದು. ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಸೇವೆ ಮಾಡಲು ಮುಂದಾಗಬೇಕುಎAದುಎಸ್.ಡಿ.ಎA. ಕಾಲೇಜಿನ ಪ್ರಾಚಾರ್ಯರಾದಡಾ. ಡಿ. ಎಲ್. ಹೆಬ್ಬಾರ ಹೇಳಿದರು.
ಅವರು ಕ.ವಿ.ವಿ. ಧಾರವಾಡದರಾಷ್ಟಿçÃಯ ಸೇವಾ ಯೋಜನಾಕೋಶ ಹಾಗೂ ಎಸ್.ಡಿ.ಎಂ. ಕಾಲೇಜಿನರಾಷ್ಟಿçÃಯ ಸೇವಾ ಯೋಜನಾಘಟಕ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿತಾಲೂಕಿನ ಸ.ಹಿ.ಪ್ರಾ. ಶಾಲೆ ಗುಡ್ಡೇಬಾಳದಲ್ಲಿ ಆರಂಭವಾದಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಯುವಜನರಿದ್ದಾರೆ. ಯುವಜನತೆ ಸಂಘಟನೆಯ ಮೂಲಕ ಸಮಾಜದ ಅಗತ್ಯತೆಗಳನ್ನು ತಿಳಿದು ಸ್ಪಂದಿಸಬೇಕು. ಸಂಘಟನೆಯಲ್ಲಿಯೇ ನಿಜವಾದ ಶಕ್ತಿಯಿದೆ. ನಮ್ಮಕಾಲೇಜಿನ ವಿದ್ಯಾರ್ಥಿಗಳು ಒಂದು ವಾರಗ್ರಾಮೀಣ ಪ್ರದೇಶದಲ್ಲಿ ಉಳಿದು ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷರಾದಗಣಪತಿಗೌಡಕಾರ್ಯಕ್ರಮ ಉದ್ಘಾಟಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಜಿ.ಎಸ್.ಹೆಗಡೆ, ಶ್ರೀಪಾದ ನಾಯ್ಕ, ದಾಕ್ಷಾಯಿಣಿ ಶೆಟ್ಟಿ, ಸಹಶಿಬಿರಾಧಿಕಾರಿಗಳಾದ ವಿದ್ಯಾಧರಕಡತೋಕ ಮತ್ತು ಪ್ರಶಾಂತ ಮೂಡಲಮನೆ ಉಪಸ್ಥಿತರಿದ್ದರು.

More Stories
ಭಟ್ಕಳದ ಕರಿಕಲ್ಲಿನಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ರಾಮತಾರಕ ಮಹಾಯಜ್ಞ
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’