June 16, 2026

ದೋಹಾದಲ್ಲಿ ‘ಸಂಭ್ರಮ 2026’ ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ರಾಜೇಶ್ ಕೃಷ್ಣನ್

ದೋಹಾ, ಕತಾರ್: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ  ‘ಕರ್ನಾಟಕ ಸಂಘ ಕತಾರ್’ (ಕೆಎಸ್‍ಕ್ಯೂ), ಇತ್ತೀಚೆಗೆ ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಂಭ್ರಮ 2026’ ಭವ್ಯ ಸಂಗೀತ ರಸಸಂಜೆ ಕಾರ್ಯಕ್ರಮವು ಅನಿವಾಸಿ ಕನ್ನಡಿಗರನ್ನು ಮಂತ್ರಮುಗ್ಧಗೊಳಿಸಿತು. “ಕನ್ನಡದ ಧ್ವನಿ… ಹೃದಯಗಳ ಸಂಭ್ರಮ” ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದ ಈ ಸಾಂಸ್ಕೃತಿಕ ಮಹೋತ್ಸವವು ಕತಾರ್ ನೆಲದಲ್ಲಿ ಕನ್ನಡದ ಶ್ರೀಮಂತ ಗಾಯನ ಪರಂಪರೆಯನ್ನು ಅತ್ಯಂತ ಯಶಸ್ವಿಯಾಗಿ ಅನಾವರಣಗೊಳಿಸಿತು.

ಗಣ್ಯರಿಂದ ದೀಪ ಪ್ರಜ್ವಲನೆ – ಭವ್ಯ ಚಾಲನೆ

ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಭಾವನಾ ನವೀನ್ ಅವರ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಶಶಿಧರ ಎಚ್.ಬಿ. ಅವರು ಸಭಾಂಗಣದ ಸುರಕ್ಷತಾ ನಿಯಮಾವಳಿಗಳ ಮಾಹಿತಿ ನೀಡಿದರು. ಬಳಿಕ ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಶ್ರೀ ಹರೀಶ್ ಪಾಂಡೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸುಜಿತ್ ಕುಮಾರ್ ಹೊಸದುರ್ಗ ಅವರು ಆಗಮಿಸಿದ್ದ ಗಣ್ಯರನ್ನು ಸ್ವಾಗತಿಸಿ, ಕತಾರ್‌ನಲ್ಲಿ ಕನ್ನಡ ಭಾಷೆ-ಸಂಸ್ಕೃತಿಯ ಪ್ರಸಾರಕ್ಕಾಗಿ ಕರ್ನಾಟಕ ಸಂಘ ನಡೆಸುತ್ತಿರುವ ನಿರಂತರ ಕೈಂಕರ್ಯಗಳನ್ನು ಶ್ಲಾಘಿಸಿದರು.

ಸಾಂಸ್ಕೃತಿಕ ರಾಯಭಾರತ್ವಕ್ಕೆ ಸಾಕ್ಷಿಯಾದ ವೇದಿಕೆ

ಈ ವರ್ಣರಂಜಿತ ಸಾಂಸ್ಕೃತಿಕ ಸಂಜೆಗೆ ಮುಖ್ಯ ಅತಿಥಿಗಳಾಗಿ ಕತಾರ್ ದೇಶದ ಭಾರತೀಯ ರಾಯಭಾರಿ ಘನತೆವೆತ್ತ ಶ್ರೀ ವಿಪುಲ್ ಹಾಗೂ ಉಪ ರಾಯಭಾರಿ (ಡಿಸಿಎಂ) ಶ್ರೀ ಸಂದೀಪ್ ಕುಮಾರ್ ಉಪಸ್ಥಿತರಿದ್ದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು.
ಗೌರವಾನ್ವಿತ ಅತಿಥಿಗಳಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಧ್ಯಕ್ಷ ಶ್ರೀ ಎ.ಪಿ. ಮಣಿಕಂಠನ್, ಕತಾರ್ ಆಟೋ ಮ್ಯೂಸಿಯಂನ ಉಪ ನಿರ್ದೇಶಕಿ ಮಿಸ್ ಫಾತಿಮಾ ಅಲ್ ಮಾದೀದ್ ಮತ್ತು ಹಿರಿಯ ಪೆಟ್ರೋಲಿಯಂ ಎಂಜಿನಿಯರ್ ಶ್ರೀ ಖಾಲಿದ್ ಅಲ್ ಫಕ್ರೂ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸಲು ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ಕೆಎಸ್‍ಕ್ಯೂ ಕಾರ್ಯಕಾರಿ ಸಮಿತಿಯ ವತಿಯಿಂದ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರನ್ನು ಅತ್ಯಂತ ವೈಭವಯುತವಾಗಿ ಸತ್ಕರಿಸಲಾಯಿತು.

ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಸಂಘದ ಯಶಸ್ಸಿನ ಬೆನ್ನೆಲುಬಾದ ಪೋಷಕರು, ಪ್ರಾಯೋಜಕರು ಹಾಗೂ ಸ್ವಯಂಸೇವಕರನ್ನು ಕೃತಜ್ಞತೆಯಿಂದ ಸ್ಮರಿಸಿದರು. ಉಪಾಧ್ಯಕ್ಷ ಶ್ರೀ ಅನಿಲ್ ಭಾಸಗಿ ಧನ್ಯವಾದ ಸಮರ್ಪಣೆ ಮಾಡಿದರು.

ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಮಂತ್ರಮುಗ್ಧಗೊಳಿಸಿದ ಗಾಯನ

ಭಾರತದ ಪ್ರಸಿದ್ಧ ನಿರೂಪಕ ಶ್ರೀ ನಟರಾಜ್ ಶೆಟ್ಟಿಕೆರೆ ತಮ್ಮ ವಾಕ್ಚಾತುರ್ಯದಿಂದ ಇಡೀ ಸಭೆಯನ್ನು ರೋಚಕವಾಗಿ ಮುನ್ನಡೆಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ “ಮೆಲೋಡಿ ಕಿಂಗ್” ಶ್ರೀ ರಾಜೇಶ್ ಕೃಷ್ಣನ್ ಮತ್ತು ಭಾರತದಿಂದ ಬಂದಿದ್ದ ಅವರ ಸುಪ್ರಸಿದ್ಧ ವಾದ್ಯವೃಂದದ ನೇರ ಗಾಯನ ಪ್ರದರ್ಶನವು ಪ್ರೇಕ್ಷಕರನ್ನು ಅಕ್ಷರಶಃ ರಂಜಿಸಿತು.
ಖ್ಯಾತ ಗಾಯಕರಾದ ಶ್ರೀಮತಿ ಪುಷ್ಪಾ ಆರಾಧ್ಯ, ಶ್ರೀಮತಿ ಸೀಮಾ ರಾಯ್ಕರ್ ಮತ್ತು ಶ್ರೀ ಸಂತೋಷ್ ದೇವಯ್ಯ ಅವರ ಅದ್ಭುತ ಗಾಯನ ಪ್ರದರ್ಶನಕ್ಕೆ ಇಡೀ ಸಭಾಂಗಣವೇ ಎದ್ದು ನಿಂತು ಕರತಾಡನದ ಮೂಲಕ ಗೌರವ ಸಲ್ಲಿಸಿತು. ಎವರ್‌ಗ್ರೀನ್ ಕನ್ನಡ ಗೀತೆಗಳು, ಹಳೆಯ ನೆನಪಿನ ಭಾವಗೀತೆಗಳು ಹಾಗೂ ಇತ್ತೀಚಿನ ಸೂಪರ್ ಹಿಸ್ ಚಿತ್ರಗೀತೆಗಳ ಸರಣಿ ಸಭಿಕರಲ್ಲಿ ವಿದ್ಯುತ್ ಸಂಚಲನ ಮೂಡಿಸಿತು. ಕೆಎಸ್‍ಕ್ಯೂ ಖಜಾಂಚಿ ಶ್ರೀ ಮಂಜೋತ್ ಸುರೇಶ್ ಅಂತಿಮ ವಂದನಾರ್ಪಣೆ ನೆರವೇರಿಸಿದರು.

ಪ್ರಮುಖ ಗಣ್ಯರ ಉಪಸ್ಥಿತಿ

ಸಮಾರಂಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಅಡಿಯ ಪ್ರಮುಖ ಶೀರ್ಷ ಸಂಸ್ಥೆಗಳಾದ ಐಸಿಸಿ, ಐಸಿಬಿಎಫ್, ಐಬಿಪಿಸಿ ಮತ್ತು ಐಎಸ್ಸಿ ಪದಾಧಿಕಾರಿಗಳು ಹಾಗೂ ವಿವಿಧ ಕರ್ನಾಟಕ ಪ್ರಾದೇಶಿಕ ಸಂಘಟನೆಗಳ ನಾಯಕರು ಭಾಗವಹಿಸಿದ್ದರು. ಗಣ್ಯರ ಸಾಲಿನಲ್ಲಿ ಶ್ರೀ ಪಿ. ಎನ್. ಬಾಬುರಾಜನ್, ಶ್ರೀ ದೀಪಕ್ ಶೆಟ್ಟಿ, ಶ್ರೀ ಎಂ. ರವಿಶೆಟ್ಟಿ, ಶ್ರೀ ಅರುಣ್ ಕುಮಾರ್, ಶ್ರೀ ವೀರೆಶ್ ಮನ್ನಂಗಿ, ಶ್ರೀ ಮಧು ಕುಮಾರ್, ಶ್ರೀ ಮಹೇಶ್ ಗೌಡ ಹಾಗೂ ಶ್ರೀ ಸಂದೀಪ್ ಶ್ರೀರಾಮರೆಡ್ಡಿ ಉಪಸ್ಥಿತರಿದ್ದರು.

ನೂತನ ಸಮಿತಿಯ ಅದ್ಭುತ ಸಾಹಸ

‘ಸಂಭ್ರಮ 2026’ರ ಅಭೂತಪೂರ್ವ ಯಶಸ್ಸು ಕರ್ನಾಟಕ ಸಂಘ ಕತಾರ್‌ನ 2026-2028ರ ಅವಧಿಯ ನೂತನ ವ್ಯವಸ್ಥಾಪನಾ ಸಮಿತಿಯ ನಿರಂತರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಈ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದ ಸಮಿತಿಯಲ್ಲಿ:

ಅಧ್ಯಕ್ಷರು: ಸುಬ್ರಹ್ಮಣ್ಯ ಹೆಬ್ಬಾಗಿಲು. ಉಪಾಧ್ಯಕ್ಷರು: ಅನಿಲ್ ಭಾಸಗಿ.ಪ್ರಧಾನ ಕಾರ್ಯದರ್ಶಿ: ಸುಜಿತ್ ಕುಮಾರ್ ಹೊಸದುರ್ಗ.ಖಜಾಂಚಿ: ಮಂಜೋತ್ ಸುರೇಶ್. ಸಾಂಸ್ಕೃತಿಕ ಕಾರ್ಯದರ್ಶಿ: ಭಾವನಾ ನವೀನ್.ಜಂಟಿ ಸಾಂಸ್ಕೃತಿಕ ಮತ್ತು ಕನ್ನಡ ಚಟುವಟಿಕೆಗಳ ಕಾರ್ಯದರ್ಶಿ: ಶಶಿಧರ ಎಚ್.ಬಿ. ಕ್ರೀಡಾ ಕಾರ್ಯದರ್ಶಿ: ಎಲ್.ಜಿ. ಪಾಟೀಲ್. ಮಾಧ್ಯಮ, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ: ಪ್ರಶಾಂತ್ ಹಿರೇಮಠ್. ಮಹಿಳಾ ಮತ್ತು ಮಕ್ಕಳ ಚಟುವಟಿಕೆಗಳ ಕಾರ್ಯದರ್ಶಿ: ಶುಭಾ ಆರ್. ರಾವ್.  ಈವೆಂಟ್ಸ್ ಮತ್ತು ಲಾಜಿಸ್ಟಿಕ್ಸ್ ಕಾರ್ಯದರ್ಶಿ: ಪ್ರಭುರಾಜು ಜಗಳೂರು. ಜಂಟಿ ಕ್ರೀಡಾ ಕಾರ್ಯದರ್ಶಿ: ದ್ರಾಕ್ಷಾಯಣಿ ಜಿ. ಪರಿಸರ ಮತ್ತು ಸದಸ್ಯತ್ವ ಕಾರ್ಯದರ್ಶಿ: ಗುರುಪ್ರಸಾದ್ ಬಿ.ಕೆ. ಕಾರ್ಯನಿರ್ವಹಿಸಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಮುಖ್ಯ ಕಲಾವಿದರು, ತಾಂತ್ರಿಕ ತಂಡ, ಸ್ವಯಂಸೇವಕರು ಹಾಗೂ ಪ್ರಾಯೋಜಕ ಸಂಸ್ಥೆಗಳಿಗೆ ಕರ್ನಾಟಕ ಸಂಘವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.

  • ಚಿನ್ನದ ಪ್ರಾಯೋಜಕರು: ಎಂ. ಪಲ್ಲೊಂಜಿ ಡಬ್ಲ್ಯೂ.ಎಲ್.ಎ. (M. Pallonji W.L.L.), ಪಾಪಾ ಜಾನ್ಸ್, ಕತಾರ್ ಡಿಸೈನ್ ಕನ್ಸೋರ್ಟಿಯಂ, ಎಂಬಿಆರ್ ಟೆಕ್ನಾಲಜೀಸ್, ಕ್ಯುಐಸಿ ಮತ್ತು ರೋಹನ್ ಕಾರ್ಪೊರೇಷನ್.
  • ಸಹ ಪ್ರಾಯೋಜಕರು: ಅಲ್ ಮುಫ್ತಾ, ಎಟಿಎಸ್, ಅಮೇರಿಕನ್ ಹಾಸ್ಪಿಟಲ್, ಪೆಟ್ರೋ-ಕ್ಯೂ, ಅಲ್ ಮೊಯೆದ್ ಏರ್ ಕಂಡೀಷನ್, ಅಲ್ಮಾ ಮತ್ತು ಚೆರ್ಬ್ಲಿ.
  • ಬೆಂಬಲಿತ ಪ್ರಾಯೋಜಕರು: ಎನ್‌ಬಿಕೆ, ಮೆಗಾ ಮಾರ್ಟ್, ಡೆಲ್ಟಾ ರೋಡ್ ಟ್ರೇಡಿಂಗ್, ಸುಡಿಯಾ ಹೈಪರ್, ಅಲ್ ಬಲಾಗ್, ಎಸ್‌ಬಿಎ ಆಟೋ ರಿಪೇರ್, ಇಂಟರ್‌ಮಾಡಲ್, ಅಲ್ಟಿಮೇಟ್ ಟ್ರೇಡಿಂಗ್, ಕ್ರೆಸ್ಟನ್, ಬಾಸ್ ಕಾಫಿ, ಡಿಕ್ಯು ಐಸ್ ಕ್ರೀಮ್, ಡೈಸೋ, ಹೋಮ್ಸ್ ಆರ್ ಅಸ್, ದೋಹಾ ಪ್ರಾಜೆಕ್ಟ್, ಕೆನರಾ ಜ್ಯುವೆಲ್ಲರಿ, ಅಮ್ವಾಜ್ ವಾಟರ್, ಸ್ಕಾರ್ಪಿಯನ್ ಲಾಜಿಸ್ಟಿಕ್ಸ್, ಅಕ್ಷಯ ಜ್ಯುವೆಲ್ಲರ್ಸ್, ಅಲ್ ಮುಫ್ತಾ ರೆಂಟ್ ಎ ಕಾರ್, ಅಲಿಶಾನ್, ಅಲ್ ಆಡಮ್ ಲಾಜಿಸ್ಟಿಕ್, ಮಲಬಾರ್ ಗೋಲ್ಡ್ ಮತ್ತು ನ್ಯಾಷನಲ್ ಎಕ್ಸ್ಚೇಂಜ್.
  • ಅಧಿಕೃತ ಮಾಧ್ಯಮ ಮತ್ತು ಎವಿ ಪಾಲುದಾರರು: ರೆಹಾಬ್, ಎಂಪಿ, ಸ್ಪಿರಿಟ್ ಇವೆಂಟ್ಸ್ ಮತ್ತು ಮಿರ್ಚಿ ಒನ್ 89.6 ಎಫ್ಎಂ.
    ಒಟ್ಟಾರೆಯಾಗಿ, ಭಾರತೀಯ ಡಯಾಸ್ಪೊರಾದಲ್ಲಿ ಸಾಂಸ್ಕೃತಿಕ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿದ ‘ಸಂಭ್ರಮ 2026’, ಕತಾರ್ ನೆಲದಲ್ಲಿ ಕನ್ನಡ ಸಾಂಸ್ಕೃತಿಕ ಆಚರಣೆಗಳಿಗೆ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

About The Author

error: Content is protected !!