ಹೊನ್ನಾವರ; ತಾಲೂಕ ಆಡಳಿತ, ಪಟ್ಟಣ ಪಂಚಾಯತ, ಪೋಲಿಸ್ ಇಲಾಖೆಯಿಂದ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಶಾಂತಿಪಾಲನಾ ಸಭೆ ತಾಲೂಕಿನ ಆಡಳಿತಸೌಧದಲ್ಲಿ ತಹಶೀಲ್ದಾರ ಪ್ರವೀಣ ಕರಾಂಡೆ ಅಧ್ಯಕ್ಷತೆಯಲ್ಲಿ ಜರುಗಿತು.
ತಾಲೂಕಿನ ವಿವಿಧಡೆಯಿಂದ ಆಗಮಿಸಿದ ಸಮಿತಿ ಸದಸ್ಯರು ಹಬ್ಬದ ಸಮಯ ಕುಂದು-ಕೊರತೆಗಳಾದ ವಿದ್ಯುತ್ ಸಮಸ್ಯೆ, ಪಟ್ಟಣದ ರಸ್ತೆ, ಬೀದಿದೀಪ ಹಾಗೂ ಗಣಪತಿ ವಿಸರ್ಜನೆ ಮಾಡುವಾಗ ಇರುವ ಸಮಸ್ಯೆ ಬಗ್ಗೆ ಮಾಹಿತಿ ನೀಡಿ ಈ ಭಾರಿ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೇಳಿಕೊಂಡರು. ಇದಕ್ಕೆ ಆಯಾ ಇಲಾಖೆಯ ಅಧಿಕಾರಿಗಳು ಉತ್ತರಿಸಿ ಈ ಬಾರಿ ಕೈಗೊಂಡ ಕ್ರಮದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಹೇಶ ಕುಮಾರ,ಪ.ಪಂ. ಮುಖ್ಯಾಧಿಕಾರಿ ಯೇಸು ಬೆಂಗಳೂರು, ತಾ.ಪಂ. ಕಿರಣಕುಮಾರ್ ಹೆಸ್ಕಾಂ ಇಲಾಖೆಯ ಆರ್.ಪಿ.ಭಟ್, ಅಗ್ನಿಶಾಮಕ, ಪೊಲೀಸ್ ಕಂದಾಯ, ಪ.ಪಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಾಲೂಕಿನ ಗಣೇಶೋತ್ಸವ ಸಮಿತಿಯವರು ಹಾಜರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ