ಭಟ್ಕಳ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬೋಟ್ನಲ್ಲೇ ಬಿದ್ದ ಪರಿಣಾಮ ಮೀನುಗಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ನಾಗೇಶ (48) ಮಹಾಬಲೇಶ್ವರ ಅಂಬಿಗ, ಬೇಲೆಹಿತ್ತ, ಕುಮಟಾ, ಗೋಕರ್ಣ ಎಂದು ಗುರುತಿಸಲಾಗಿದೆ.

ಈತನು ವೃತ್ತಿಯಿಂದ ಮೀನುಗಾರನಾಗಿದ್ದ. ಜಲವಿಜಯ ಪರ್ಷಿಯನ್ ಬೋಟ್ ನಲ್ಲಿ ಸಮುದ್ರಕ್ಕೆ ಮೀನುಗಾರಿಕೆಗಾಗಿ ತೆರಳಿದ್ದು ಸುಮಾರು 7-8 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಕಾರ್ಯ ನಡೆಯುತ್ತಿರುವಾಗ ನಾಗೇಶ ಅಂಬಿಗ ಕುಸಿದು ಬೋಟ್ನಲ್ಲೇ ಬಿದ್ದಿದ್ದಾನೆ. ತಕ್ಷಣ ಸಹೋದ್ಯೋಗಿಗಳು ಆತನನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ತರುವ ಮುನ್ನವೇ ಸಾವನ್ನಪ್ಪಿದ್ದಾನೆ ಎಂದು ದೃಢ ಪಡಿಸಿದ್ದಾರೆ.
ಈ ಬಗ್ಗೆ ಗ್ರಾಮಿಣ ಠಾಣೆಯಲ್ಲಿ ಮಂಜುನಾಥ ಮಹಾಬಲೇಶ್ವರ ಅಂಬಿಗ ದೂರು ನೀಡಿದ್ದಾರೆ.

More Stories
ಮಾರುಕೇರಿ ಹೂತ್ಕಳದ ಧನ್ವಂತರಿ ದೇವಾಲಯದಲ್ಲಿ ಜುಲೈ 25 ರಂದು ‘ಲಕ್ಷ ತುಳಸಿ ಅರ್ಚನೆ’ ಹಾಗೂ ‘ಸ್ವರ್ಣ ಪಾದುಕಾ ಭಿಕ್ಷೆ’
ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ‘ಕೃಷ್ಣ ಯಜುರ್ವೇದ ಸ್ವಾಹಾಕಾರ’ ಧಾರ್ಮಿಕ ಮಹೋತ್ಸವ ಸಂಪನ್ನ
ಸಾಧಕ ಭಟ್ಕಳ ತಾಲೂಕು ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಆಟೋ ಚಾಲಕರ-ಮಾಲಕರ ಸಂಘದಿಂದ ಸನ್ಮಾನ