ಭಟ್ಕಳ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬೋಟ್ನಲ್ಲೇ ಬಿದ್ದ ಪರಿಣಾಮ ಮೀನುಗಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ನಾಗೇಶ (48) ಮಹಾಬಲೇಶ್ವರ ಅಂಬಿಗ, ಬೇಲೆಹಿತ್ತ, ಕುಮಟಾ, ಗೋಕರ್ಣ ಎಂದು ಗುರುತಿಸಲಾಗಿದೆ.
ಈತನು ವೃತ್ತಿಯಿಂದ ಮೀನುಗಾರನಾಗಿದ್ದ. ಜಲವಿಜಯ ಪರ್ಷಿಯನ್ ಬೋಟ್ ನಲ್ಲಿ ಸಮುದ್ರಕ್ಕೆ ಮೀನುಗಾರಿಕೆಗಾಗಿ ತೆರಳಿದ್ದು ಸುಮಾರು 7-8 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಕಾರ್ಯ ನಡೆಯುತ್ತಿರುವಾಗ ನಾಗೇಶ ಅಂಬಿಗ ಕುಸಿದು ಬೋಟ್ನಲ್ಲೇ ಬಿದ್ದಿದ್ದಾನೆ. ತಕ್ಷಣ ಸಹೋದ್ಯೋಗಿಗಳು ಆತನನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ತರುವ ಮುನ್ನವೇ ಸಾವನ್ನಪ್ಪಿದ್ದಾನೆ ಎಂದು ದೃಢ ಪಡಿಸಿದ್ದಾರೆ.
ಈ ಬಗ್ಗೆ ಗ್ರಾಮಿಣ ಠಾಣೆಯಲ್ಲಿ ಮಂಜುನಾಥ ಮಹಾಬಲೇಶ್ವರ ಅಂಬಿಗ ದೂರು ನೀಡಿದ್ದಾರೆ.

More Stories
ಹಂಗಾರಖಂಡದಲ್ಲಿ ಅದ್ದೂರಿ ವನಮಹೋತ್ಸವ: ನದಿ ಅಂಚಿನಲ್ಲಿ ಹಸಿರು ಕ್ರಾಂತಿ, ಪ್ರಕೃತಿ ರಕ್ಷಣೆಗೆ ಕರೆ
ವಿಶ್ವ ಪರಿಸರ ದಿನ: ವಡೇರ ಮಠದಲ್ಲಿ ಒಂದು ಗಿಡ ಅಮ್ಮನ ಹೆಸರಲ್ಲಿ ಅಭಿಯಾನ
ವಡೇರ ಮಠದಲ್ಲಿ ಲಕ್ಷ ಕುಂಕುಮಾರ್ಚನೆ ಸಂಭ್ರಮ; 200ಕ್ಕೂ ಅಧಿಕ ಮಹಿಳೆಯರಿಂದ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ