ಹೊನ್ನಾವರ: ಕಳೆದ ಆರು ವರ್ಷಗಳಿಂದ ನಿರಂತರವಾಗಿ ಭಜನೆ ಮತ್ತು ಭಕ್ತಿಗೀತೆಗಳನ್ನು ವಿವಿಧ ಸಮಾಜದ 64 ಕ್ಕೂ ಹೆಚ್ಚು ಮಹಿಳೆಯರನ್ನೊಳ ಗೊಂಡ 6 ಭಜನಾ ಮಂಡಳಿಗಳಿAದ ಡಿ.21 ರಂದು “ಶಾರದಾ ವಂದನೆ” ವಾರ್ಷಿಕ ಕಾರ್ಯಕ್ರಮ ಪ್ರಭಾತನಗರದ ಮೂಡಗಣಪತಿ ಸಭಾಭವನದಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ. ಖ್ಯಾತ ಸಂಗೀತ ವಿದ್ವಾಂಸ ಎಸ್. ಶಂಭು ಭಟ್ ಕಡತೋಕಾ ಉದ್ಘಾಟಿಸಲಿದ್ದಾರೆ. ಮಂಡಳಿಯ ಎಲ್ಲ 64 ಸದಸ್ಯರು ತಮ್ಮ ಮಂಡಳಿಳೊAದಿಗೆ ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ಭಜನೆ ಪ್ರಸ್ತುಪಡಿಸುವರು. ಹೊನ್ನಾವರ-ಕುಮಟಾ- ಭಟ್ಕಳ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಕಾರ್ಯಕ್ರಮವನ್ನು ದೇವಾಲಯಗಳಲ್ಲಿ ಸೇವಾರೂಪದಲ್ಲಿ ಭಜನಾ ಕಾರ್ಯಕ್ರಮವನ್ನು ತಾರಾ ಭಟ್ ಇವರ ಮುಂದಾಳತ್ವದ ತಂಡ ಮಾಡುತ್ತಾ ಬಂದಿದೆ.
ಮಾಗೋಡ ಜಿ.ಟಿ.ಹೆಗಡೆ ಇವರಸ್ಮರಣೆಯಲ್ಲಿ ಕಾರ್ಯಕ್ರಮ ಜರುಗಲಿದೆ, ನಮ್ಮ ಸಂಘಗಳ ವಾರ್ಷಿಕೋತ್ಸವಕ್ಕೆ ಭಕ್ತಿ ಸಂಗೀತ ಪ್ರಿಯರು ಆಗಮಿಸಬೇಕು ಎಂದು ಸಂಯೋಜಕಿ ತಾರಾ ಭಟ್ ಮನವಿ ಮಾಡಿದ್ದಾರೆ.

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ