March 1, 2026

ಸಂಸ್ಥಾಪಕರ ದಿನಾಚರಣೆ

ಕಾರ್ಕಳ,:ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನ ಸೃಷ್ಟಿ ಮತ್ತು ಆತ್ಮ ಉನ್ನತಿಯ ಪರಿಚಯ ವೇ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಅಡಿಪಾಯವಾಗಿದೆ ಎಂದು ಮಾಹೆ ಮಣಿಪಾಲ ದ ಡಾಕ್ಟರ್ ಶರತ್ ರಾವ್ ಹೇಳಿದರು.


ಅಜೆಕಾರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಜ್ಞಾನಸುಧ ಶಿಕ್ಷಣ ಸಂಸ್ಥೆ ವತಿಯಿಂದ ರವಿವಾರ
ಕಾರ್ಕಳ ದ ಜ್ಞಾನಸುಧ ಶಿಕ್ಷಣ ಸೌಂದರ್ಯ ಆವರಣದಲ್ಲಿ ಜರುಗಿದ ಸಂಸ್ಥಾಪಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.


ವಿದ್ಯಾರ್ಥಿಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಹಂತದಲ್ಲಿ ವಿಮರ್ಶ ಆತ್ಮಕ ಚಿಂತನೆ ಸ್ವಜನಶೀಲತೆ ತಂಡ ಕಾರ್ಯ ಹಾಗೂ ಉತ್ತಮ ಸoವ ಹನ ಕೌಶಲಗಳು ಅತ್ಯಗತ್ಯ ಜ್ಞಾನವು ಎಲ್ಲೆಡೆ ಲಭ್ಯವಿರುವ ಇಂದಿನ ಕಾಲದಲ್ಲಿ ಅದನ್ನು ಸರಿಯಾಗದ
ರೀತಿಯಲ್ಲಿ ಬಳಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಶಿಕ್ಷಕರು ಮತ್ತು ಪೋಷಕರು ಪರಸ್ಪರ ಕೈ ಜೋಡಿಸಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಯಲು ಸಾಧ್ಯ ಜ್ಞಾನಸುಧ ಸಂಸ್ಥೆ ಯು ಶಿಸ್ತು ಮತ್ತು ನೈತಿಕತೆಯ ಮೂಲಕ ದೇಶಕ್ಕೆ ಆಸ್ತಿಯಾಗುವ ನಾಗರಿಕರನ್ನು ರೂಪಿಸುತ್ತೇವೆ ಎಂದು ಪ್ರಶಂಸಿದ್ದರು.
ಕೇವಲ ಕಟ್ಟಡಗಳಿಂದ ಶಿಕ್ಷಣ ಸಂಸ್ಥೆಗಳು ಶ್ರೇಷ್ಠ ವಿನಿ ಸುವುದಿಲ್ಲ.ಅಲ್ಲಿನ ವಿದ್ಯಾರ್ಥಿಗಳು ಪಡೆಯುವ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳಿಂದ ಸಂಸ್ಥೆಯ ಘನತೆ ಹೆಚ್ಚುತ್ತದೆ ಜ್ಞಾನಸುಧ ಶಿಕ್ಷಣ ಸಂಸ್ಥೆಯು ಡಾಕ್ಟರ್ ಸುಧಾಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನವಸ್ಥೆ ಅಲ್ಲ ಬದಲು ಕಟ್ಟಿಕೊಡುವ ಮತ್ತು ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿವೆ ಎಂದು ಶ್ಲಾಘಿಸಿದರು.


ಅಜೆಕಾರು ಪದ್ಮಗೋಪಾಲ ಅಧ್ಯಕ್ಷ
ಡಾಕ್ಟರ್ ಸುಧಾಕರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ನೈತಿಕತೆ ಮತ್ತು ಸಂಸ್ಕಾರದ ಅರಿವು ಮೂಡಿಸುವುದು ಇಂದಿನ ಕಾಲಘಟ್ಟದ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಜ್ಞಾನಸುಧಾ ಸಂಸ್ಥೆ ಯು ಪ್ರತಿಭೆ ಮತ್ತು ಜ್ಞಾನಕ್ಕೆ ವೇದಿಕೆ ನೀಡುವುದರ ಜೊತೆಗೆ ಮೌಲ್ಯಧಾರಿತ ಶಿಕ್ಷಣಕೆ ಮೊದಲ ಆದ್ಯತೆ ನೀಡುತ್ತದೆ ಎಂದು ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದ 227 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ. ಐ. ಟಿ. ಐ. ಐ.ಎಸ್. ಸಿ. ಯೆನ್. ಐಟಿ,ಪರೀಕ್ಷೆಯಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು ಎಂಜಿನಿಯರಿಂಗ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಒಂದು ಸಾವಿರದೊಳಗಿನ ಶ್ರೀಯಾಂಕಪಡೆದ 12 ವಿದ್ಯಾರ್ಥಿಗಳನ್ನು ಮತ್ತು ಯೆನ್. ಡಿ.ಯೇ. ಪರೀಕ್ಷೆಯಲ್ಲಿ ಸಾಧನೆ ಮಾಡಿದವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.


ಎಂಜಿನಿಯರಿಂಗ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಒಂದು ಸಾವಿರದೊಳಗಿನ ಸ್ರೇ ಯಾಂಕ ಪಡೆದ 41 ವಿದ್ಯಾರ್ಥಿಗಳನ್ನು ಹಾಗೂ ಸಿಎ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿದವರನ್ನು , ಗೌರವಿಸಲಾಯಿತು.


ಮೂಡಬಿದರೆ ಬನ್ನೇಡ್ಕ ಎಸ್ ಕೆಎಫ್ ಚೈರ್ ಮೆನ್ ಡಾಕ್ಟರ್ ಜಿ ರಾಮಕೃಷ್ಣ ಆಚಾರ್, ಜ್ಞಾನ ಸುಧಾ ಸಂಸ್ಥೆ ಪೂರ್ವ ವಿದ್ಯಾರ್ಥಿ , ಗೂಗಲ್ ಇಂಜಿನಿಯರ್ ಸಂಕೇತ್ ಜಿಬಿ ಮಾತನಾಡಿದರು. ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಜ್ಞಾನಸುಧ ಶಿಕ್ಷಣ ಸಂಸ್ಥೆಯ 171 ವಿದ್ಯಾರ್ಥಿಗಳ ಪರವಾಗಿ ಒಟ್ಟು ಮೂರು ಲಕ್ಷದ 42,000 ಭಾರತೀಯ ಸೇನೆಗೆ ಧನಾತ್ಮಕ ಧನ ಸಹಾಯ ಈ ಸಂದರ್ಭದಲ್ಲಿ ನೀಡಲಾಯಿತು.ಟ್ರಸ್ಟಿ ಅನಿಲ್ ಕುಮಾರ್ ಜೈನ್
ವಂಡಿಸಿ ಉಪನ್ಯಾಸಕಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ವರದಿ : ಅರುಣ  ಭಟ್ಟ ಕಾರ್ಕಳ

About The Author

error: Content is protected !!