ಶಿರಸಿ: ಇಲ್ಲಿನ ನಾಟ್ಯಶ್ರೀ ಕಲಾ ಕೇಂದ್ರದಿಂದ ನೃತ್ಯೋತ್ಸವ ಹಾಗೂ ಮನಸ್ವಿನಿ ನೃತ್ಯ ನಾಟಕದ ಪ್ರಥಮ ಪ್ರದರ್ಶನ ನಗರದ ರಂಗಧಾಮದಲ್ಲಿ ಜನವರಿ 4ರಂದು ಸಂಜೆ 5.30ರಿಂದ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ಮ್ಯಾನೇಜರ್ ಮಹೇಂದ್ರ ಹೆಗಡೆ ಕರಸುಳ್ಳಿ ವಹಿಸಿಕೊಳ್ಳಲಿದ್ದು, ಉದ್ಘಾಟನೆಯನ್ನು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ವಿ. ಭಟ್ಟ ವಹಿಸಿಕೊಳ್ಳುವರು. ಅತಿಥಿಯಾಗಿ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಭಾಗವಹಿಸುವರು.
ಬಳಿಕ ಮಹಿಳೆಯರಿಂದ ಕೇರಳ, ರಾಜಸ್ತಾನಿ, ಪಶ್ಚಿಮ ಬಂಗಾಲ, ಕೊರವಂಜಿ ಅರೆ ಶಾಸ್ತ್ರೀಯ ಹಾಗು ಜಾನಪದ ನೃತ್ಯ ಪ್ರದರ್ಶನವಾಗಲಿದೆ. ಬಳಿಕ ದಿವಾಕರ ಹೆಗಡೆ ಕೆರೆಹೊಂಡ ವಿರಚಿತ ಮನಸ್ವಿನಿ ವಿಶೇಷ ನೃತ್ಯ ನಾಟಕ ಪ್ರದರ್ಶನವಾಗಲಿದೆ. ನೃತ್ಯಗುರು ವಿದ್ಯಾಶ್ರೀ ಹೆಗಡೆ ಸಂಯೋಜಿಸಿದ್ದು ಚೇತನಾ ಹೆಗಡೆ ಹಾಡುಗಾರಿಕೆಯಲ್ಲಿ ಭಾಗವಹಿಸುವರು. ತಬಲಾದಲ್ಲಿ ಮಂಜುನಾಥ ಮೋಟಿನಸರ, ಕೊಳಲಿನಲ್ಲಿ ಸುಭೋದರಾವ್, ಸಿತಾರ ದಲ್ಲಿ ಪುಷ್ಪಲತಾ ಭಟ್ ಭಾಗವಹಿಸುವರು ಎಂದು ಪ್ರಕಟನೆಯಲ್ಲಿ ಸಂಸ್ಥೆ ಅಧ್ಯಕ್ಷೆ ವಿದ್ಯಾಶ್ರೀ ಹೆಗಡೆ ತಿಳಿಸಿದ್ದಾರೆ.

More Stories
ಜಾತ್ರಾ ಸಮಯದಲ್ಲಿ ಹೋಟೆಲ್ ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಸಕರಿಂದ ಸೂಚನೆ.
ಸಪ್ತಕದ 20 ವರ್ಷಗಳ ಸಾರ್ಥಕ ಪಯಣದ 950ನೇ ವಿಶೇಷ ಕಾರ್ಯಕ್ರಮ ಫೆ 28 ರಂದು ನವದೆಹಲಿಯಲ್ಲಿ
ಭಕ್ತಾದಿಗಳಿಗೆ ತಂಪು ಪಾನೀಯ ಕರ್ನಾಟಕ ರಕ್ಷಣಾ ವೇದಿಕೆಯಿಂದ