ಗುಂಡ್ಲುಪೇಟೆ : ಪಟ್ಟಣದ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ ಕಾರ್ಯಪಾಲಕ ಅಭಿಯಂತರರ ನೂತನ ಕಚೇರಿಯನ್ನು ಕ್ಷೇತ್ರದ ಶಾಸಕರಾದ ಹೆಚ್ ಎಂ ಗಣೇಶ್ ಪ್ರಸಾದ್ ರವರು ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸುಮಾರು ವರ್ಷಗಳಿಂದ ನೆನೆ ಗುದ್ದಿಗೆ ಬಿದ್ದಿದ್ದ ಕಚೇರಿಯನ್ನು ಹೊಸದಾಗಿ ನಿರ್ಮಿಸಿ ಇದೇ ಮೊಟ್ಟ ಮೊದಲ ಬಾರಿಗೆ ಪಟ್ಟಣದಲ್ಲಿ ಕಟ್ಟಲಾಗಿದೆ. ಈ ಮಹಾನ್ ಕಾರ್ಯ ಮಾಡುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಜಿಎಸ್ ಮಧುಸೂದನ್ ಉಪಾಧ್ಯಕ್ಷರಾದ ಅಣ್ಣಯ್ಯ ಸ್ವಾಮಿ, ಹಾಗೂ ಪುರಸಭೆ ಎಲ್ಲ ಸದಸ್ಯರುಗಳು ಸೇರಿದಂತೆ ಇ.ಇ. ಪ್ರದೀಪ್ ಕುಮಾರ್, ಎ.ಇ.ಇ. ಕೆಎಂ ಸಿದ್ದಲಿಂಗಪ್ಪ, ಕೆಇಬಿ ಇಲಾಖೆಯ ನೌಕರರ ವರ್ಗದವರು ಹಾಗೂ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಇದ್ದರು.
ವರದಿ: ವಿಶ್ವನಾಥ ಸಾಲ್ಕೋಡ್ ಹೊನ್ನಾವರ
About The Author


More Stories
ಗುಂಡ್ಲುಪೇಟೆ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಮಾಧ್ಯಮ ಪ್ರತಿನಿಧಿ ಶ್ರೀಮತಿ ತಾರಾ ನಾಗೇಂದ್ರ ಅವರಿಗೆ ಗೌರವ ಸನ್ಮಾನ
ನಮ್ಮ ಪರಂಪರೆ ನಮ್ಮ ಹೆಮ್ಮೆ, ಸಂರಕ್ಷಣೆ ನಮ್ಮ ಜವಾಬ್ದಾರಿ: ತೆರಕಣಾಂಬಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶ್ರಮದಾನ
ನಿವೃತ್ತ ಯೋಧರಿಗೆ ಅದ್ದೂರಿ ಮೆರವಣಿಗೆ, ಅಭಿನಂದನಾ ಸಮಾರಂಭ