ಹೊನ್ನಾವರ: ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಕುದ್ರಿಗಿ ಗ್ರಾಮದ ಸ೦ಶಿ ತೂಗು ಸೇತುವೆಯನ್ನು ವೀಕ್ಷಿಸಿದರು.
೨೦೧೬ರಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ನಿವೇದಿತಾ ಆಳ್ವಾ ಅವರ ಸಮಯದಲ್ಲಿ ನಿರ್ಮಾಣವಾದ ಈ ತೂಗು ಸೇತುವೆ ಶರಾವತಿ ಎಡ ದಂಡೆಯ ಸುಮಾರು ೬ ಗ್ರಾ.ಪಂ ಗಳನ್ನು ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆಯಾಗಿ ಬಹು ಜನ ಉಪಯೋಗಿ ಸೇತುವೆಯಾದ್ದರಿಂದ ಅದಕ್ಕೆ ಪೂರಕವಾಗಿ ಇನ್ನೊಂದು ಸೇತುವೆಯನ್ನು ನಿರ್ಮಿಸಲು ವಿವಿಧ ಈ ಸಂದರ್ಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ತೂಗು ಸೇತುವೆ ಪಕ್ಕದಲ್ಲಿಯೇ ಇನ್ನೊಂದು ಸೇತುವೆಯನ್ನು ವಾಹನಗಳ ಓಡಾಡಲು ಅನುಕೂಲವಾಗುವಂತೆ ನಿರ್ಮಿಸಲು ಕ್ರಮ ಜರುಗಿಸುತ್ತೇವೆ. ಸರಿ ಸುಮಾರು ಸೇತುವೆ ನಿರ್ಮಾಣಕ್ಕೆ ೫೦ ಕೋಟಿಗೂ ಮೀರಿ ವೆಚ್ಚವಾಗಬಹುದು. ಈ ಕುರಿತು ಮಾಹಿತಿ ಪಡೆದು ಚರ್ಚಿಸಿ ಕ್ರಮ ಜರುಗಿಸುವುದಾಗಿ ಭರವಸೆ ನಿಡದರು.
ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ವೈಧ್ಯ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಾಯಿ ಗಾಂವಕರ್, ಮಾಜಿ ಗ್ರಾ.ಪಂ ಅಧ್ಯಕ್ಷ್ಷ ಫೈಸಲ್ ಮಸ್ತಾನ್, ಯೋಗೆಶ್ ರಾಯ್ಕರ್, ಈಶ್ವರ ನೀಲಯ್ಯ ನಾಯ್ಕ, ಗೋವಿಂದ ನಾಯ್ಕ, ಚಂದ್ರಕಾಂತ ಕೋಚರೇಕರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರತಿಷ್ಠಿತ ರಾಷ್ಟ್ರೀಯ ಶಾಲಾ ಪ್ರಶಸ್ತಿಯನ್ನು ಗಳಿಸಿದೆ.
ಡಾ. ಜಿ.ಎಸ್. ಹೆಗಡೆ ಅವರಿಗೆ ಭವ್ಯ ನಾಗರಿಕ ಸನ್ಮಾನ
ಹೊನ್ನಾವರದಲ್ಲಿ ಸೂಪರ್ ಮಾರ್ಕೆಟ್ ಕಳ್ಳತನ: 48 ಗಂಟೆಯಲ್ಲೇ ಆರೋಪಿತ ಬಂಧನ