March 1, 2026

ಇಂಡೋ–ಟಿಬೆಟಿಯನ್ ಗಡಿಯಲ್ಲಿ ಭಟ್ಕಳದ ಯುವಕನ ಸೇವೆ

ಭಟ್ಕಳ: ಭಟ್ಕಳ ತಾಲೂಕಿನ ಪುರವರ್ಗ ಗ್ರಾಮದ ಕೋಣೂರು ನಿವಾಸಿ ಪ್ರದೀಪ ನಾಯ್ಕ ಅವರು ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿದ್ದು, ಪ್ರಸ್ತುತ Indo‑Tibetan Border Police (ಐಟಿಬಿಪಿ) ಪಡೆ ಮೂಲಕ ಇಂಡೋ–ಟಿಬೆಟಿಯನ್ ಗಡಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದು ತಾಲೂಕಿನ ಜನರಲ್ಲಿ ಹೆಮ್ಮೆಯ ವಿಷಯವಾಗಿದೆ.
ಕಠಿಣ ಹಾಗೂ ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರದೀಪ ನಾಯ್ಕ ಅವರು, ಹಿಮಾಲಯದಂತಹ ದುಸ್ತರ ಭೌಗೋಳಿಕ ಪರಿಸ್ಥಿತಿಯಲ್ಲಿ ದೇಶರಕ್ಷಣೆಯ ಮಹತ್ವದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಸಾಧನೆ ಪುರವರ್ಗ–ಕೋಣೂರು ಭಾಗದ ಯುವಕರಿಗೆ ಪ್ರೇರಣೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಈ ಸಾಧನೆಗೆ ತಂದೆ ಮಾಸ್ತಪ್ಪ ನಾಯ್ಕ, ತಾಯಿ ಹೊನ್ನಮ್ಮ ನಾಯ್ಕ ಸೇರಿದಂತೆ ಕುಟುಂಬದ ಸದಸ್ಯರು, ಬಂಧುಮಿತ್ರರು ಹಾಗೂ ಸ್ಥಳೀಯ ನಾಗರಿಕರು ಅಭಿನಂದನೆ ಸಲ್ಲಿಸಿದ್ದು, ತಾಯಿ ಭಾರತಾಂಬೆಯ ಆಶೀರ್ವಾದದಿಂದ ಅವರ ಸೇವಾ ಜೀವನ ಇನ್ನಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.

About The Author

error: Content is protected !!