ಶಿರಸಿ: ನಗರದ ರಾಯರಪೇಟೆಯಲ್ಲಿರುವ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂನಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಹಾಗೂ ಅವರ ಅನುಕೂಲಕ್ಕಾಗಿ ವರ್ಷದ ಎಲ್ಲಾ ದಿನಗಳಲ್ಲೂ ತೆರೆದಿರುವ ನಗರದ ಏಕೈಕ ವಿದ್ಯಾರ್ಥಿನಿಲಯ ಇದಾಗಿದ್ದು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇದ್ದರೆ ಉಳಿದವರಿಗೆ ರಿಯಾಯತಿ ದರದಲ್ಲಿ ಈ ಸೌಲಭ್ಯ ನೀಡಲಾಗುವುದು.
ಪ್ರವೇಶ ಪರೀಕ್ಷೆ 2026 ಮೇ 3ನೇ ದಿನಾಂಕ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯ ವನ್ನು ಅಥವಾ ಮೊಬೈಲ್ ನಂಬರ್ 9483963429 / 9902543129 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

More Stories
ಪೌಷ್ಟಿಕ ಆಹಾರದ ಸೇವನೆಯಿಂದ ಕ್ಷಯರೋಗ ಬೇಗ ಗುಣಮುಖ. – ತಾಲೂಕಾ ಆರೋಗ್ಯಾಧಿಕಾರಿ ಡಾ. ಮಧುಕರ ಪಾಟೀಲ.
ಅರಣ್ಯ ಇಲಾಖೆ ಕಾರ್ಯ ವೈಖರ್ಯಕ್ಕೆ ತೀವ್ರ ಅಸಮಧಾನ : ನಡುತೋಪು ಲೆಕ್ಕಕ್ಕೆ ಕೋಟಿಗಳಷ್ಟು ಹಣ ಖರ್ಚು: ಕೋಟಿ ಹೊಂಡ ಎಲ್ಲಿ, ನೆಟ್ಟಿದ್ದು ಎಷ್ಟು, ಬದುಕಿದ್ದು ಎಷ್ಟು- ಅರಣ್ಯವಾಸಿಗಳ ಪ್ರಶ್ನೆ
ಪೌಷ್ಟಿಕ ಆಹಾರದ ಸೇವನೆಯಿಂದ ಕ್ಷಯ ರೋಗಿಗಳ ರೋಗನಿರೋಧಕ ಶಕ್ತಿ ಹೆಚ್ಚಳ – ಉದಯಶಂಕರ