ಶಿರಸಿ: ಇಲ್ಲಿನ ಅನೇಕ ಸಂಸ್ಥೆಯು ನಿಲೇಕಣಿ ಸರಕಾರಿ ಪಿಯು ಕಾಲೇಜಿನ ಸಹಕಾರದಲ್ಲಿ ಆ.16ರ ಬೆಳಿಗ್ಗೆ 10ಕ್ಕೆ ಕವಿತೆಯೊಡನೆ ನಾವು ಪಿಯು ಕಾಲೇಜು ಮಟ್ಟದ ಕವಿತಾ ವಾಚನ ಸ್ಪರ್ಧೆ ಹಮ್ಮಿಕೊಂಡಿದೆ. ಕಾರ್ಯಕ್ರಮವನ್ನು ಯುವ ಯಕ್ಷಗಾನ ಕಲಾವಿದೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ನಾಗರಾಜ ಗಾಂವಕರ ವಹಿಸಿಕೊಳ್ಳುವರು. ಅತಿಥಿಗಳಾಗಿ ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ, ಕವಯತ್ರಿ ಗಾಯತ್ರೀ ರಾಘವೇಂದ್ರ, ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂತೋಷ ಶೆಟ್ಟಿ, ಪ್ರಭಾರ ಪ್ರಾಚಾರ್ಯ ವಸಂತ ನಾಯಕ ಭಾಗವಹಿಸುವರು ಎಂದು ಸಂಚಾಲಕ, ಉಪನ್ಯಾಸಕ ಉಮೇಶ ನಾಯ್ಕ ತಿಳಿಸಿದ್ದಾರೆ.
ವರದಿ : ರಾಗವೇಂದ್ರ ಬೆಟ್ಟಕೊಪ್ಪಾ ಶಿರಸಿ

More Stories
ಸ್ಟೂಡೆಂಟ್ಸ್ ಹೋಂ ವಿದ್ಯಾರ್ಥಿನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಶ್ರೀ ಶಂಕರ ಜಯಂತಿ ಆಚರಣೆ – ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ವೈಭವದ ಕಾರ್ಯಕ್ರಮ
‘ಕನ್ನಡ ನುಡಿತೇರು–2026’ ಕಾರ್ಯಕ್ರಮ ಯಶಸ್ವಿ