ಹಿರೇಗುತ್ತಿ: ಊರಿನ ಅಬಾಲವೃದ್ಧರಿಗೂ ಪ್ರೀತಿಪಾತ್ರನಾಗಿದ್ದ ಶಾಂತ, ಸಹೃದಯಿ ವ್ಯಕ್ತಿತ್ವದ ಹಿರೇಗುತ್ತಿ ಮೇಸಿ ಬೊಮ್ಮಯಣ್ಣನ ತೃತೀಯ ಪುತ್ರನಾದ ಗಂಗಾಧರ ಬೊಮ್ಮಯ್ಯ ಗಾಂವಕರ(ಗಂಗು) (ವಯಸ್ಸು 59) ಅವರು ನಿಧನರಾದರು.
ಸೌಮ್ಯ ಸ್ವಭಾವ, ಮೃದು ಮಾತು ಮತ್ತು ಎಲ್ಲರೊಂದಿಗೂ ಹಿತೈಷಿತನದಿಂದ ವರ್ತಿಸುವ ಗುಣಗಳಿಂದ ಅವರು ಊರಿನ ಪ್ರತಿಯೊಬ್ಬರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಅವರ ಅಗಲಿಕೆಯಿಂದ ಕುಟುಂಬಸ್ಥರಿಗೆ ಮಾತ್ರವಲ್ಲದೆ, ಸಮಸ್ತ ಹಿರೇಗುತ್ತಿ ಗ್ರಾಮಕ್ಕೂ ಅಪಾರ ನಷ್ಟವಾಗಿದೆ.
ಮೃತರು ತಾಯಿ,ಮಡದಿ, ಮಗಳು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ವರದಿ : ಎನ್ ರಾಮೂ ಹಿರೇಗುತ್ತಿ

More Stories
ಮನೆ- ಮನವನ್ನು ಬೆಳಗಲು ಮನೆಗೊಂದು ಗ್ರಂಥಾಲಯ ಅವಶ್ಯ. -ಡಾ. ಮಾನಸ
ಬರ್ಗಿಯಲ್ಲಿ ಮನ್ನಣೆಯ ಮಣೆಯೇರಿದ ಗಾಯತ್ರಿ ಗೌಡ
ಡಾಕ್ಟರ್ ಮಾಮನೆಂದು ಇನ್ನು ಯಾರನ್ನು ಕರೆಯಲಿ? . ಅವರಿಗೆ ಅವರೇ ಸಾಟಿಯಾಗಿದ್ದರು.