ಭಟ್ಕಳ: ತಾಲೂಕಿನ ಜಾಲಿ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮೃತರನ್ನು ಜಾಲಿ ಬೀಚ್ ರೋಡ್ ನಿವಾಸಿಯಾದ ಈರಯ್ಯ ತಂದೆ ಮಾಸ್ತಪ್ಪ ಮೊಗೇರ (65) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಅವರು ಎಂದಿನಂತೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಅನಾಹುತವಾಗಿ ಸಮುದ್ರದಲ್ಲಿ ಮುಳುಗಿದರೆಂದು ತಿಳಿದುಬಂದಿದೆ.
ಈ ಕುರಿತು ಮೃತರ ಪುತ್ರ ಮನೋಹರ ಮೊಗೇರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

More Stories
ಮಣ್ಕುಳಿ ಪ್ರೀಮಿಯರ್ ಲೀಗ್–2026: ರಾಯಲ್ ಸಾಮ್ರಾಟ್ ಚಾಂಪಿಯನ್
ಭಟ್ಕಳದಲ್ಲಿ ಎ.19ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಭಟ್ಕಳದಲ್ಲಿ ನಕಲಿ ಆಧಾರ್–ಪಹಣಿ ಮೂಲಕ ನ್ಯಾಯಾಲಯ ವಂಚನೆ: ಆರೋಪಿತ ಬಂಧನ