
ಭಟ್ಕಳ: ಗೌರಿಗಣೇಶ ಹಬ್ಬದ ಹಿನ್ನೆಲೆ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ವೃತ್ತ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಅವರು ಮಾತನಾಡಿ, ಪ್ರತಿಷ್ಠಾಪನಾ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ, ಅಗ್ನಿಶಾಮಕ, ಆರೋಗ್ಯ, ಸ್ಥಳೀಯ ಸಂಸ್ಥೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತ ಹೊರಡಿಸಿದ ಸೂಚನೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಮಿತಿಗಳಿಗೆ ಸೂಚಿಸಿದರು.
ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಅಹಿತಕರ ಘಟನೆ ತಪ್ಪಿಸುವ ಕ್ರಮ ಕೈಗೊಳ್ಳಬೇಕು. ಧ್ವನಿವರ್ಧಕ ಬಳಕೆ ಸರ್ಕಾರ ನಿಗದಿಪಡಿಸಿದ ಮಿತಿಯೊಳಗೇ ಇರಬೇಕು, ಪ್ರಚೋದನಕಾರಿ ಹಾಡು ಭಾಷಣ ನಿಷೇಧ, ಡಿಜೆ ಅಳವಡಿಕೆಗೆ ಅನುಮತಿ ಇಲ್ಲ. ರಸ್ತೆ ಸಂಚಾರಕ್ಕೆ ಅಡಚಣೆ ಬಾರದಂತೆ ನೋಡಿಕೊಳ್ಳಿ ಹಾಗೂ ಎಲ್ಲಾ ಕಾರ್ಯಕ್ರಮಗಳ ವಿವರಗಳನ್ನು ಮುಂಚಿತವಾಗಿ ಪೊಲೀಸರಿಗೆ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಪಿಎಸೈ ರನ್ನಗೌಡ, ಪಿಎಸೈ ಭರಮಪ್ಪ ಬೆಳಗಳಿ ಸೇರಿದಂತೆ ವಿವಿಧ ಭಾಗದ ಗಣೇಶೋತ್ಸವ ಸಮಿತಿ ಸದಸ್ಯರು, ಮುಖಂಡರು ಗ್ರಾಮಸ್ಥರು ಭಾಗವಹಿಸಿದರು.
More Stories
ಭಟ್ಕಳದಲ್ಲಿ ಅದ್ಧೂರಿ ಗಣಪತಿ ವಿಸರ್ಜನೆ, ಡೋಲುವಾದ್ಯ, ನೃತ್ಯ ಸಂಭ್ರಮದಲ್ಲಿ 34 ಗಣೇಶ ಮೂರ್ತಿಗಳ ವಿಸರ್ಜನೆ
ಬೈಕ್ ಲಾರಿ ಡಿಕ್ಕಿ!, ಗಣೇಶೋತ್ಸವದಿಂದ ಮರಳುತ್ತಿದ್ದ ಯುವಕನ ದುರ್ಮರಣ
ಗಣೇಶೊತ್ಸವ ಪ್ರತಿಷ್ಟಾಪನಾ ಸ್ಥಳ ಹಾಗೂ ವಿಸರ್ಜನಾ ಮೆರವಣೆಗೆ ಸಂಚರಿಸುವ ಮಾರ್ಗ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್