ಹಿರೇಗುತ್ತಿ: ಊರಿನ ಅಬಾಲವೃದ್ಧರಿಗೂ ಪ್ರೀತಿಪಾತ್ರನಾಗಿದ್ದ ಶಾಂತ, ಸಹೃದಯಿ ವ್ಯಕ್ತಿತ್ವದ ಹಿರೇಗುತ್ತಿ ಮೇಸಿ ಬೊಮ್ಮಯಣ್ಣನ ತೃತೀಯ ಪುತ್ರನಾದ ಗಂಗಾಧರ ಬೊಮ್ಮಯ್ಯ ಗಾಂವಕರ(ಗಂಗು) (ವಯಸ್ಸು 59) ಅವರು ನಿಧನರಾದರು.
ಸೌಮ್ಯ ಸ್ವಭಾವ, ಮೃದು ಮಾತು ಮತ್ತು ಎಲ್ಲರೊಂದಿಗೂ ಹಿತೈಷಿತನದಿಂದ ವರ್ತಿಸುವ ಗುಣಗಳಿಂದ ಅವರು ಊರಿನ ಪ್ರತಿಯೊಬ್ಬರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಅವರ ಅಗಲಿಕೆಯಿಂದ ಕುಟುಂಬಸ್ಥರಿಗೆ ಮಾತ್ರವಲ್ಲದೆ, ಸಮಸ್ತ ಹಿರೇಗುತ್ತಿ ಗ್ರಾಮಕ್ಕೂ ಅಪಾರ ನಷ್ಟವಾಗಿದೆ.
ಮೃತರು ತಾಯಿ,ಮಡದಿ, ಮಗಳು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ವರದಿ : ಎನ್ ರಾಮೂ ಹಿರೇಗುತ್ತಿ

More Stories
ಚಂದ್ರಶೇಖರ ಅಚ್ಯುತ ಗಾಂವಕರ ನಿಧನ
ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಹಿರೇಗುತ್ತಿಯ ಹೈಸ್ಕೂಲ್ ವಿದ್ಯಾರ್ಥಿನಿಗೆ ತೃತೀಯ ಸ್ಥಾನ
ಬರ್ಗಿಯ ನಾಗನೆಲೆಯಲ್ಲಿ ವಂದೇ ಮಹಾಲಿಂಗಶಿವಮನ್ನಣೆಗೆ ಪಂಡಿತ್- ಸಮೀರ್