ಶಿರಸಿ: ನುಡಿದು ತೋರುವದಕ್ಕಿಂತ ನಡೆದು ತೋರಿಸಿದರೆ ಪರಿಣಾಮ ಹೆಚ್ಚು ಎಂದು ಬೆಳಗಾವಿಯಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಪ.ಪೂ. ಡಾ|| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಜಡ್ಡಿಗದ್ದೆಯ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಆಶ್ರಯದಲ್ಲಿ ಭಾನುವಾರ ನಡೆದ ಬೃಹತ್ ‘ಹಿಂದೂ ಸಮಾವೇಶ’ದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ನಾಲಗೆ ಒಂದು. ಕಾಲುಗಳು ಎರಡು. ಒಂದು ನುಡಿದರೆ ಎರಡರಷ್ಟು ನಡೆದು ತೋರಿಸಬೇಕು.ಹಿಂದುಗಳನ್ನು ಹತ್ತಿರದಿಂದ ಪ್ರೀತಿಸಬೇಕು ಎಂದರು.
ಹಿಂದುತ್ವ ಗಟ್ಟಿಗೊಳಿಸಿಕೊಳ್ಳಲು ಹಿಂದೂ ಸಮಾವೇಶ ಬೇಕು.
ನಾವು ಹಿಂದೂ ಎಂದು ಹೇಳಲು ಯಾರೂ ಹಿಂಜರಿಯಬಾರದು. ಅಭಿಮಾನದಿಂದ ಹಿಂದೂ ಎಂದು ಹೇಳಬೇಕು ಎಂದ ಶ್ರೀಗಳು, ಹಿಂದೂ ಸಮಾವೇಶ ನಿತ್ಯವೂ ಆಗಬೇಕು. ಹೋದಲೆಲ್ಲ ನಾಲ್ಕು ಜನ ಸೇರಿದಲ್ಲಿ ಸಂಸ್ಕೃತಿ, ದೇಶದ ಬಗ್ಗೆ ಮಾತನಾಡಬೇಕು ಎಂದರು.
ಹಿಂದುಗಳ ಹೊಸ ವರ್ಷ ಯುಗಾದಿ ದಿನದಂದು ಎಲ್ಲ ಹಿಂದುಗಳ ಮನೆಗೆ ತೆರಳಿ ಬೇವು ಬೆಲ್ಲ ಕೊಟ್ಟು ಪ್ರೀತಿಯಿಂದ ಜೊತೆ ಮಾತಾಡಿದರೆ ಅವರು ಎಂದೂ ಎಂಥ ವೇಳೆಯೂ ಮತಾಂತರ ಆಗುವದಿಲ್ಲ ಎಂದ ಶ್ರೀಗಳು, ಎತ್ತರದಿಂದ ಇರುವದು ಬಿಟ್ಟು ಹತ್ತಿರದಿಂದ ಇರಬೇಕು ಎಂದರು.
ಹಿಂದುಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಬೆಳೆಸಿದರೆ ಹಿಂದುತ್ವ ದೇಶ ಉಳಿಯುತ್ತದೆ ಎಂದರು.
ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ ವಿಶ್ವ ಹಿಂದೂ ಪರಿಷತ್ನ ರಾಜ್ಯ ಸಂಚಾಲಕ ಸೂರ್ಯನಾರಾಯಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಟ್ಟು, ಬೆಳವಣಿಗೆ, ಅಂದಿನ ಅವಶ್ಯಕತೆ, ಕಾರ್ಯ ವಿಸ್ತಾರ ತಿಳಿಸಿ, ಮುಂದಿನ ಪೀಳಿಗೆ ಹಿಂದುತ್ವದ ಜಾಗೃತಿ ಕಾರ್ಯ ಇಂತಹ ಸಮಾವೇಶ ಮಾಡುತ್ತದೆ. ನಿಸ್ವಾರ್ಥ ಸಮಾವೇಶ ಹಿಂದೂ ಸಮಾವೇಶ ಎಂದರು.
ಭಾರತ ಕಾನೂನು ಬದಲಾಗದೇ ಹೋದರೆ, ಹಿಂದುಗಳು ಜಾಗೃತ ಆಗದೇ ಇದ್ದರೆ ಮುಂದೆ ಅಪಾಯಕಾದಿದೆ. ದೇಶ ಉಳಿಯಬೇಕಾದರೆ ದೇಶ ಪ್ರೀತಿಸುವ ಜನ ಇರಬೇಕು ಎಂದರು.
ಈ ವೇಳೆ ಜಡ್ಡಿಗದ್ದೆ ಮಂಡಲದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಶಿವರಾಮ ನಾ. ಭಟ್ಟ, ಹೊಸ್ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಗ್ರಾಮದ ಪ್ರಮುಖರಾಗಿ ಗಿರಿಜಾ ಹೆಗಡೆ ಹಾಗೂ ರತ್ನಾವತಿ ನಾಯ್ಕ ಉಪಸ್ಥಿತರಿದ್ದರು.
ಸೀಮಾ ವೈದಿಕ ಪರಿಷತ್ ಪ್ರಮುಖರು ವೇದಘೋಷ ಮಾಡಿದರು.
ಶಿವರಾಮ ಭಟ್ಟ ಪ್ರಕಾಶ ಪೂಜಾರಿ, ನಾರಾಯಣ ಭಟ್ಟ, ಮಂಜು ಪೂಜಾರಿ ಶ್ರೀಗಳಿಗೆ ಫಲಸಮರ್ಪಣೆ ಮಾಡಿದರು. ರಾಘವೇಂದ್ರ ಹೆಗಡೆ ಮೆಣಸಿ ಸೀಮೆಯ ವಿಶೇಷ ಕಾಳುಮೆಣಸು ನೀಡಿದರು. ಭಾಗವತ ತುಳಗೇರಿ ಗಜಾನನ ಭಟ್ಟ ಪ್ರಾರ್ಥಿಸಿದರು. ಭಗವದ್ಗೀತೆಯ ಪಠಣ ಕೂಡ ನಡೆಯಿತು. ಶಿವರಾಮ ಭಟ್ ಸ್ವಾಗತಿಸಿದರು. ಪ್ರವೀಣ ಮಣ್ಮನೆ ಪ್ರಾಸ್ತಾವಿಕ ಮಾತನಾಡಿದರು. ಪಿ.ಜಿ.ಹೆಗಡೆ ನಿರ್ವಹಿಸಿದರು. ಚೈತ್ರ ಭಟ್ಟ ದೇಶಭಕ್ತಿಗೀತೆ ಹಾಡಿದರು. ಅರವಿಂದ ಹೆಗಡೆ ನಿರ್ಣಯ ಮಂಡಿಸಿದರು. ರಮೇಶ ಪೂಜಾರಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಜಡ್ಡಿಗದ್ದೆಯ ದೇವಸ್ಥಾನದ ಆವರಣದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಭಾರತ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಿತು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಸೇರಿದಂತೆ ಐನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.
ಹಿಂದೂ ಸಮಾವೇಶದ ನಿರ್ಣಯಗಳು
ಹಿಂದೂ ಧರ್ಮದ ರಕ್ಷಣೆ, ಮಠ, ಮಂದಿರ, ಗೋವುಗಳ ಹಾಗೂ ಮಾತೃ ರಕ್ಷಣೆ
- ಪೂರ್ವಿಕರಿಂದ ಬಂದ ಎಲ್ಲಾ ಚರ, ಸ್ಥಿರ ಆಸ್ತಿಗಳ ಅಭಿವೃದ್ಧಿ ಪಡಿಸುತ್ತ ಸಂರಕ್ಷಿಸುವ ಜವಬ್ದಾರಿ
- ನಮ್ಮ ನೆಲ ಜಲ ಸಂಸ್ಕೃತಿ ಸಂಪ್ರದಾಯ ರಕ್ಷಣೆ
- ಪರಿಸರಕ್ಕೆ ಮಾರಕವಾದ ಬೇಡ್ತಿ ಅಘನಾಶಿನಿ ಶರಾವತಿ ನದಿ ತಿರುವು ಯೋಜನೆ ತಡೆಗೆ ಎಂತಹ ಸ್ಥಿತಿಗೂ ಸಿದ್ದ.
- ವ್ಯಸನಮುಕ್ತ ಸಮಾಜ ರಚನೆಗೆ ಬದ್ಧತೆ
- ಸ್ವದೇಶಿ ವಸ್ತು ಬಳಕೆಗೆ ಸಂಕಲ್ಪ
ಮಾತೆಯರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಟಾಟಾ, ಬೈಬೈ ಬಿಡಿಸಬೇಕು. ಎಲ್ಲರನ್ನು ಪ್ರೀತಿ ಮಾಡಿ, ಪ್ಲೀಸ್ ಮಾಡುವದು ಬಿಡಬೇಕು.
-ಹುಕ್ಕೇರಿ ಶ್ರೀ

More Stories
ವೈದ್ಯಕೀಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ 6ನೇ ರ್ಯಾಂಕ್
ಮಾ.೧೫ಕ್ಕೆ ಜಡ್ಡಿಗದ್ದೆಯಲ್ಲಿ ‘ಹಿಂದೂ ಸಮಾವೇಶ’: ಹುಕ್ಕೇರಿ ಶ್ರೀ ಭಾಗಿ
ಯುಗಾದಿಯಿಂದ ರಾಮನವಮಿವರೆಗೆ ನವ ದಿನನದಿ ಉಳಿಸಿ ಸತ್ಯಾಗ್ರಹಕ್ಕೆ ಭಜನಾ ಅಭಿಯಾನ