ಹೊನ್ನಾವರ : ತಾಲೂಕಿನ ನಾಜಗಾರಿನ ಶ್ರೀ ಕ್ಷೇತ್ರ ಉಪ್ಪಿನಹೊಯ್ಗೆ ನಾರಾಯಣ ದೇವಸ್ಥಾನಕ್ಕೆ ಇದೆ ಏ. 29 ರವಿವಾರ ದಂದು ಗೇರುಸೊಪ್ಪ ಸೀಮೆಯ ಶ್ರೀ ಗೋವರ್ಧನಗಿರಿ ಮುಖ್ಯಪ್ರಾಣ ದೇವರ ಪಲ್ಲಕ್ಕಿಯು ಪ್ರಥಮ ಬಾರಿಗೆ ಆಗಮಿಸುತ್ತಿದೆ.


ಮದ್ಯಾಹ್ನ 4 ಗಂಟೆಗೆ ನಾಜಗಾರ್ ಕ್ರಾಸ್ ತಲುಪಲಿದ್ದು, ಅಲ್ಲಿಂದ ಪೂರ್ಣಕುಂಭ, ವಾದ್ಯ ಘೋಷದ ಮೂಲಕ ಮುಖ್ಯಪ್ರಾಣ ದೇವರ ಪಲ್ಲಕ್ಕಿಯ ಭವ್ಯ ಮೆರವಣಿಗೆಯ ಮೂಲಕ ನಾರಾಯಣ ದೇವರ ಸನ್ನಿದಿಗೆ ಬರಮಾಡಿ ಕೊಳ್ಳಲಾಗುವುದು. ಅದೇ ದಿನ ಸಂಜೆ ದಂಡಾವಳಿ ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ, ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ಊರಿನ ಸದ್ಭಕ್ತರು ಈ ಧಾರ್ಮಿಕ ಮೆರವಣಿಗೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ವಿನಂತಿ ಮಾಡಿಕೊಂಡಿದ್ದಾರೆ.

More Stories
ಕಾಸರಕೋಡ್ ಬೀಚಿನಲ್ಲಿ 102 ಕಡಲಾಮೆ ಮರಿ ಜನ್ಮ
ಉತ್ತಮ ಆರೋಗ್ಯ ಸುಸ್ಥಿರ ಸಂಪತ್ತು” ಆರೋಗ್ಯ ಮತ್ತು ಹೂಡಿಕೆ ಜಾಗೃತಿ ಕಾರ್ಯಕ್ರಮ
ಎ.ಸಿ.ಪಿ ಪಾಂಡುರಂಗ ಭಂಡಾರಿ ಇವರಿಗೆ ಮುಖ್ಯಮಂತ್ರಿಗಳ ಪೊಲೀಸ್ ಪದಕ.