ಹೊನ್ನಾವರ: ಪಂಚ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಗುಣವಂತೆಯ ಶ್ರೀ ಶಂಭುಲಿAಗೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ, ಅಷ್ಟಬಂಧ ,ಬ್ರಹ್ಮಕಲಶೋತ್ಸವ, ಧರ್ಮಗುರುಗಳ ಸಾನಿಧ್ಯದಲ್ಲಿ ಧರ್ಮಸಭೆ, ಧಾರ್ಮಿಕ ಪ್ರವಚನ, ಅನ್ನ ಸಂತರ್ಪಣೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಏಪ್ರೀಲ್ 10 ರಿಂದ 19 ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ. ನರಸಿಂಹ ಪಂಡಿತ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಎಸ್.ಡಿ.ಎಂ.ಕಾಲೇಜಿನ ಆವರಣದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು ಪೌರಣಿಕ ಹಿನ್ನಲೆ ಹೊಂದಿರುವ ಪಂಚ ಕ್ಷೇತ್ರದಲ್ಲಿ ಒಂದಾದ ಗುಣವಂತೆ ಶಂಭುಲಿAಗೇಶ್ವರ ದೇವಸ್ಥಾನ ಜೀರ್ಣಾವಸ್ಥೆಯಲ್ಲಿ ಇದ್ದುದನ್ನು ಮನಗಂಡು ಮುರುಡೇಶ್ವರ ನಿರ್ಮಾತ್ರ ದಿ. ಆರ್ .ಎನ್.ಶೆಟ್ಟಿ ಅವರ ಸುಪುತ್ರರಾದ ಸುನಿಲ್ ಶೆಟ್ಟಿ ಅವರು ಬಹುಕೋಟಿ ವೆಚ್ಚದಲ್ಲಿ ಶಿಲಾಮಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಇದರ ಲೋಕಾರ್ಪಣಾ ಕಾರ್ಯಕ್ರಮವನ್ನು ಸಂಭ್ರಮ, ಸಡಗರದಿಂದ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವೇ. ಶ್ರೀ ಜಯರಾಮ ರಾಮಕೃಷ್ಣ ಅಡಿಗಳ್ ಮುರುಡೇಶ್ವರ ಇವರ ಆಚಾರ್ಯತ್ವದಲ್ಲಿ ಏ. 10 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಏ.11 ರಂದು ಸಾಯಂಕಾಲ ಶಿಖರಕಲಶ ಸಂಸ್ಕಾರ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯ ನ್ಯಾಯಾಧೀಶರಾದ ಎಸ್. ಜಿ. ಪಂಡಿತ್ ರವರು ಮತ್ತು ಖ್ಯಾತ ವಾಸ್ತುತಜ್ಞರಾದ ವಿದ್ವಾನ್ ಶ್ರೀ ಮಹೇಶ್ ಮುನಿಯಂಗಳರವರ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ. ಸಾಂಸ್ಕೃತಿಕ ವೈಭವದ ಭಾಗವಾಗಿ ದೀಕ್ಷಾ ರಾಮಕೃಷ್ಣ ಕೆರಮನೆ ಇವರ ಖ್ಯಾತಿಯ "ಹೆಜ್ಜೆ ಗೆಜ್ಜೆ" ಕಾರ್ಯಕ್ರಮ, ವಿದುಷಿ ಶ್ರೀಮತಿ ನಾಗವೇಣಿ ಹೆಗಡೆ,ಕೆರೆಮನೆ ಮತ್ತು ವಿದ್ವಾನ್ ಶ್ರೀ ಶಿವಾನಂದ ಭಟ್ಟ , ಹಡಿನಬಾಳರವರಿಂದ ಗಾಯನ ಹಾಗೂ ಶ್ರೀ ರಮೇಶ ಮೇಸ್ತ ತಂಡದವರಿAದ "ಶಿವ ತಾಂಡವ ನೃತ್ಯ" ಕಾರ್ಯಕ್ರಮ ನಡೆಯಲಿದೆ. ಏ.12. ಶ್ರೀಮದ್ ಮಾಧವನಂದ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ ಮತ್ತು ಶಂಭುಲಿAಗೇಶ್ವರ ದೇವರ ಪೀಠ ಪ್ರತಿಷ್ಠೆ, ವಾಹನ ಶಿಖರದ್ವಜಾದಿ ಪರಿವಾರ ಪ್ರತಿಷ್ಠೆ, ಅಷ್ಟ ಬಂಧ ಲೇಪನ, ನಿರೀಕ್ಷಾ ಪೂಜೆ ಹಾಗೂ ನೂತನ ಶ್ರೀ ಶಂಭುಲಿAಗೇಶ್ವರ ದೇವಾಲಯದ ಸಹಸ್ರಮಾನದ ಲೋಕಾರ್ಪಣೆ ಕಾರ್ಯಕ್ರಮಗಳು ದೇವಸ್ಥಾನ ನಿರ್ಮಾತ್ರ ಶ್ರೀ ಸುನಿಲ್ ಆರ್. ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಜರುಗಲಿದೆ. ಧರ್ಮಸಭೆಯಲ್ಲಿ ಬಹುಭಾಷಾ ಪಾರಂಗತರು, ನಟರು, ಬರಹಗಾರರಾದ ಪ್ರೊಫೆಸರ್ ಕೆ.ಇ. ರಾಧಾಕೃಷ್ಣ ಮತ್ತು ಖ್ಯಾತ ಮೂರ್ತಿನಿರ್ಮಾಣಗಾರರಾದ ಜಿ.ಎಲ್. ಭಟ್ಟ ಉಪಸ್ಥಿತರಿರುವರು. ಪದ್ಮಶ್ರೀ ಪಂಡಿತ್ ವೆಂಕಟೇಶಕುಮಾರ್, ಧಾರವಾಡ ಇವರ ಗಾಯನ ಮತ್ತು ಸನಾತನ ಶಂಕರ ವಿಶೇಷ ಭಕ್ತಿ ಗೀತೆಗಳನ್ನು ಶ್ರೀ ಹರ್ಷ ಮತ್ತು ತಂಡದವರಿAದ ಪ್ರಸ್ತುತಗೊಳ್ಳಲಿದೆ. ಏ 13.4.2026 ಸೋಮವಾರ ಶ್ರೀಮತ್ ಮಾಧವಾನಂದ ಭಾರತಿ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಲಿದ್ದು, ನಂತರ ಪುತ್ತೂರು ನರಸಿಂಹ ನಾಯಕ್ ರವರಿಂದ ಗಾಯನ ಮತ್ತು ಸಿರಿ ಕಿಣಿ ಅವರಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಏ. 14 ಶ್ರೀಮತ್ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬ್ರಹ್ಮಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ ಮತ್ತು ಧರ್ಮಸಭೆಯಲ್ಲಿ ಆಶೀರ್ವಚನ ನಡೆಯಲಿದೆ. ವೇದಿಕೆ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ ಮತ್ತು ಉದ್ಯಮಿ ಮಾರಣಕಟ್ಟೆ ಮಂಜ, ಹೈದರಾಬಾದ್ ಇವರು ಉಪಸ್ಥಿತರಿರುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಡಿತ್ ಪರಮೇಶ್ವರ ಹೆಗಡೆ ಕಲ್ಭಾಗ ಇವರಿಂದ ಗಾಯನ ಮತ್ತು ಡಾ. ಶ್ರೀನಿಧಿ ಗೌಡ ಅವರಿಂದ ಭರತನಾಟ್ಯ ಪ್ರಸ್ತುತಗೊಳ್ಳಲಿದೆ. ಏ.15 ರಂದು ಯಕ್ಷ ಮಾಣಿಕ್ಯ ಚಿಂತನ ಹೆಗಡೆಯವರಿಂದ ಗಾನವೈಭವ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಮಲ್ಲೇಪುರಂ ಜಿ ವೆಂಕಟೇಶ್ ಧರ್ಮಸಭೆ ನಡೆಸಿಕೊಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ್ ಗುರೂಜಿ ಅವರ ಹಿರಿಯ ಶಿಷ್ಯರಾದ ಸ್ವಾಮಿ ಸೂರ್ಯವಂಶಿ ಅವರಿಂದ ಗಾನ ಧ್ಯಾನ ಜ್ಞಾನ ದ ಮೂಲಕ ಆಶೀರ್ವಚನ ತದನಂತರದಲ್ಲಿ ಸಂಗೀತಾ ನಾಯ್ಕ ಇವರಿಂದ ಗಾಯನ, ಭಂಡಾರಿ ಸಮುದಾಯದವರಿಂದ ಪಂಚ ವಾದ್ಯ ಪ್ರಸ್ತುತಗೊಳ್ಳಲಿದೆ. ಏ. 16 ರಂದು ಶ್ರೀ ಕ್ಷೇತ್ರ ಹೊರನಾಡು ಧರ್ಮದರ್ಶಿಗಳಾದ ಶ್ರೀ ಭೀಮೇಶ್ವರ ಜೋಶಿ ಹಾಗೂ ಪರಿಸರವಾದಿಗಳಾದ ಶಿವರಾಮ್ ಗಾಂವ್ಕರ್ ,ಕನಕನಹಳ್ಳಿ ಇವರು ಮುಖ್ಯ ಅತಿಥಿಗಳಾಗಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ನಂತರ ವಿದುಷಿ ಶೃತಿ ಬೋಡೆ, ಯಲ್ಲಾಪುರ ಮತ್ತು ಪಂಡಿತ ಬಿ. ಕೃಷ್ಣ ಭಟ್, ಮುಂಬೈ ಇವರಿಂದ ಗಾಯನ ಪ್ರಸ್ತುತಗೊಳ್ಳಲಿದೆ. ಏ. 17 ರ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ಮಾರುತಿ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ಮಾಡಲಿದ್ದಾರೆ. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿನಿಧಿ ಕಜಂಪಾಡಿ ಸುಬ್ರಮಣ್ಯ ಭಟ್ಟ ಅವರ ವಿಶೇಷ ಉಪನ್ಯಾಸ ನಡೆಯಲಿದೆ. ವಿದುಷಿ ಸಂಗೀತ ಕಟ್ಟಿ, ಧಾರವಾಡ ಇವರಿಂದ ಗಾಯನ ಮತ್ತು ಮನುಹಂದಾಡಿ ಕುಂದಾಪುರ ಇವರಿಂದ ಹಾಸ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಏ.18 ರಂದು ವಾರ್ಷಿಕ ಬ್ರಹ್ಮ ರಥೋತ್ಸವ ,ಜಾತ್ರಾ ಮಹೋತ್ಸವ ಜರುಗಲಿದೆ.
ಏ. 19 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದ ನಂತರ ಅಭಿನಂದನಾ ಸಮಾರಂಭ ನಡೆಯಲಿದೆ. ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳು ವೈದ್ಯ, ಸಂಸದರಾದ ವಿಶ್ವೇಶ್ವರ ಹೆಗಡೆ, ಕಾಗೇರಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ , ಶಾಸಕರಾದ ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಮತ್ತು ಮಾಜಿ ಶಾಸಕ ಸುನೀಲ್ ನಾಯ್ಕ ಅತಿಥಿಗಳಾಗಿ ಆಗಮಿಸಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ವೈಭವದ ಭಾಗವಾಗಿ ಊರ ನುರಿತ ಕಲಾವಿದರಿಂದ ನಾಟಕ ಮತ್ತು ಯಕ್ಷಗಾನ ಜರುಗಲಿದೆ. ಪ್ರತಿದಿನವು ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದಭೋಜನ ಇರಲಿದ್ದು, ಭಕ್ತಾಧಿಗಲಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಹೆಗಡೆ, ಆಡಳಿತ ಕಮಿಟಿ ಉಪಾಧ್ಯಕ್ಷ ಶಿವಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಹೆಗಡೆ ಗುಣವಂತೆ, ಎಂ.ಆರ್.ಹೆಗಡೆ, ಖಜಾಂಚಿ ಗೋವಿಂದ ಗೌಡ, ಉಪಖಜಾಂಚಿ ಶಿವಾನಂದ ನಾಯ್ಕ, ಸದಸದಸ್ಯ ಎಂ.ಆರ್.ಹೆಗಡೆ, ಉಪಸ್ಥಿತರಿದ್ದರು.

More Stories
“ವಿಶ್ವ ಹಿರಿಯರ ನಾಗರಿಕ ದಿನಾಚರಣೆ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆ”
ಸೇವಾ ನಿವೃತ್ತಿಯನ್ನು ಪಡೆಯುತ್ತಿರುವ ಶ್ರೀ ಜಿ.ಕೆ.ಭಟ್ಟ
ಕಾಸರಕೋಡ್ ಬೀಚಿನಲ್ಲಿ 102 ಕಡಲಾಮೆ ಮರಿ ಜನ್ಮ