April 16, 2026

ಗುಣವಂತೆ: ಶಂಭುಲಿಂಗೇಶ್ವರ ದೇವಾಲಯದಲ್ಲಿ ಅಷ್ಟಬಂಧ–ಬ್ರಹ್ಮಕಲಶೋತ್ಸವ


ಹೋನ್ನಾವರ ; ಗುಣವಂತೆಯ ಶಂಭುಲಿಂಗೇಶ್ವರ ದೇವಾಲಯದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು  ಭಕ್ತಿಭಾವದಿಂದ ಶುಭಾರಂಭಗೊಂಡಿತು.
ಬೆಳಿಗ್ಗೆ 9:30 ಗಂಟೆಗೆ ದೇವತಾ ಪ್ರಾರ್ಥನೆ, ಸೀಮಾ ಮರ್ಯಾದೆ, ಮಹಾಸಂಕಲ್ಪ, ಮಹಾ ಗಣಪತಿ ಹೋಮ ಹಾಗೂ ಶತರುದ್ರೀಯ ಜಪ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.


ಶಿಲಾಮಯ ದೇವಾಲಯದ ನಿರ್ಮಾತೃರಾದ ಶ್ರೀ ಸುನಿಲ್ ಶೆಟ್ಟಿ ದಂಪತಿಗಳನ್ನು ದೇವಾಲಯದ ಮಹಾದ್ವಾರದಿಂದ ಪಂಚವಾದ್ಯ, ಚಂಡೆ ವಾದನ, ತಾಳ ನೃತ್ಯ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಭಕ್ತಿಭಾವದಿಂದ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ವೇದಮೂರ್ತಿ ಜಯರಾಮ್ ಅಡಿಗಳ್, ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಭಟ್, ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ನರಸಿಂಹ ಪಂಡಿತ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಹೆಗಡೆ ಗುಣವಂತೆ, ಎಂ.ವಿ. ಹೆಗಡೆ ಕೆರೆಮನೆ, ಶಿವಾನಂದ ಗೌಡ ಅಡಿಮನೆ, ಗೋವಿಂದ ಗೌಡ ಹೆಬ್ಬಾರ ಹಿತ್ತಲ, ಧರ್ಮ ನಾಯ್ಕ, ಶಿವಾನಂದ ನಾಯ್ಕ, ರಾಜೇಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಭೋಜನವನ್ನು ಸ್ವೀಕರಿಸಿ ಕೃತಾರ್ಥರಾದರು.


ದಿ. 12-04-2026ರಂದು ನಡೆಯಲಿರುವ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ಕೈಗೊಳ್ಳಲಾಗಿದೆ.

About The Author

error: Content is protected !!