ಭಟ್ಕಳ : ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾಗಿ 15 ವರ್ಷಗಳ ಕಾಲ ಕಾರ್ಯನಿರ್ವಹಿಸಿ , ಕೊಪ್ಪ ಗ್ರಾಮ ಪಂಚಾಯತಿಗೆ ವರ್ಗಾವಣೆಗೊಂಡ ಮಹೇಶ ನಾಯ್ಕ ಇವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ನಾಗವೇಣಿ ಗೊಂಡ, ಅಧ್ಯಕ್ಷರು ಗ್ರಾಮ ಪಂಚಾಯತ ಮಾರುಕೇರಿ, ಶ್ರೀ ಎಂ.ಡಿ.ನಾಯ್ಕ, ಉಪಾಧ್ಯಕ್ಷರು,ಹಾಗು ಸರ್ವ ಸದಸ್ಯರು, ಶಿವಾನಂದ ಹೆಬ್ಬಾರ, ಅಧ್ಯಕ್ಷರು, ವಿ.ಎಸ್.ಎಸ್.ಮಾರುಕೇರಿ, ನಾರಾಯಣ ಹೆಬ್ಬಾರ, ಮಾಜಿ ಅಧ್ಯಕ್ಷರು, ಗ್ರಾ.ಪಂ.ಮಾರುಕೇರಿ, ರಾಘವೇಂದ್ರ ಹೆಬ್ಬಾರ, ಗಣಪಯ್ಯ ಗೊಂಡ, ಗೊಂಡ ಸಮಾಜದ ಮುಖಂಡರು, ಮೋಹನ ಗೊಂಡ , ಮಾಜಿ ಗ್ರಾಂ. ಪಂ.ಸದಸ್ಯರು, ರೇವತಿ ನಾಯ್ಕ ಸೇವಾ ಪ್ರತಿನಿಧಿ, ರಾಘವೇಂದ್ರ ನಾಯ್ಕ ಅಧ್ಯಕ್ಷರು ಎಸ್.ಡಿ.ಎಂ.ಸಿ.ಕೋಟಖAಡ ,ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ಊರ ಗಣ್ಯರು ಹಾಜರಿದ್ದರು.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ