ಭಟ್ಕಳ: ವಿಶ್ವಪ್ರಸಿದ್ಧ ಮುರುಡೇಶ್ವರದಲ್ಲಿ ಹೈದರಾಬಾದ್ ಮೂಲದ ಪ್ರವಾಸಿಗನೊಬ್ಬ ಕಳೆದುಕೊಂಡಿದ್ದ 48,190 ನಗದು ಹೊಂದಿದ ಬ್ಯಾಗ್ನ್ನು ಸ್ಥಳೀಯ ಯುವಕನೊಬ್ಬ ಪ್ರಾಮಾಣಿಕತೆಯಿಂದ ಹಿಂತಿರುಗಿಸಿದ ಘಟನೆ ಶ್ಲಾಘನೀಯವಾಗಿದೆ.
ಪ್ರವಾಸಿಗನು ದೇವಸ್ಥಾನದ ಬಳಿ ಬ್ಯಾಗ್ ಕಳೆದುಕೊಂಡಿದ್ದು, ಗರಡಿಗಡ್ಡೆಯ ವಿಷ್ಣು ನಾಗಪ್ಪ ನಾಯ್ಕ ಅವರಿಗೆ ಅದು ಸಿಕ್ಕಿತು. ತಕ್ಷಣವೇ ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದರು. ನಂತರ ಪಿಎಸ್ ಐ ಹನುಮಂತ ಬಿರಾದರ್ ಅವರ ಸಮ್ಮುಖದಲ್ಲಿ ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಪ್ರವಾಸಿಗರು ವಿಷ್ಣು ನಾಯ್ಕ ಅವರಿಗೆ ಧನ್ಯವಾದ ಸಲ್ಲಿಸಿದ್ದು, ಅವರ ಈ ಪ್ರಾಮಾಣಿಕ ನಡೆಗೆ ಪೊಲೀಸರು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

More Stories
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶ್ರೀ ಅರುಣಾನಂದ ಸ್ವಾಮೀಜಿ ಸಾಂತ್ವನ
ಕಪ್ಪೆಚಿಪ್ಪು ದುರಂತದ ಮೃತರ ಮನೆಗಳಿಗೆ ಪ್ರಮೋದ್ ಮಧ್ವರಾಜ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ
ಮೃತರ ಕುಟುಂಬಗಳಿಗೆ ಕಾಗೇರಿ ಸಾಂತ್ವನ