ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣ ಸಮೀಪದ ಜೇನು ಸೊಸೈಟಿ ಬಿಲ್ಡಿಂಗನಲ್ಲಿರುವ ಯು.ಕೆ.ಸೌಹಾರ್ದ ಸೊಸೈಟಿ ಲಿಮಿಟೆಡ್ ಯಲ್ಲಾಪುರ ಇದರ ಹೊನ್ನಾವರ ಶಾಖೆಯಲ್ಲಿ ರವಿವಾರ ಮಧ್ಯಾಹ್ನ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಹಾನಿ ಸಂಭವಿಸಿದೆ.

ಬ್ಯಾಂಕನಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ವೈಯರನಲ್ಲಿ ಬೆಂಕಿ ಕಂಡಾಗ ದಟ್ಟದಾದ ಹೊಗೆ ಆವರಿಸಿದೆ. ಸ್ಥಳಿಯರು ಬೆಂಕಿಯನ್ನು ಗಮನಿಸಿ ಪೊಲೀಸರು ಹಾಗೂ ಅಗ್ನಿಶಾಮಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸುವ ಮೂಲಕ ಬೆಂಕಿ ಕೆನ್ನಾಲಿಗೆ ಉಳಿದ ಅಂಗಡಿಗಳಿಗೆ ವ್ಯಾಪಿಸಿದಂತೆ ನೋಡಿಕೊಂಡರು. ಬ್ಯಾಂಕ್ ಒಳಗಿನ ಕಾಗದಪತ್ರಗಳು ಪೀಠೋಪಕರಣಗಳಿಗೆ ಹಾನಿ ಉಂಟಾಗಿರುದಾಗಿ ತಿಳಿದುಬಂದಿದೆ. ರವಿವಾರ ರಜೆ ಇದ್ದ ಕಾರಣ ಸಾರ್ವಜನಿಕರು ಆಗಮಿಸದೇ ಇರುವುದರಿಂದ ದೊಡ್ಡ ಅನಾಹುತ ತಪ್ಪಿದೆ.

More Stories
ಅಗ್ನಿವೀರ್ ಹುದ್ದೆಗೆ ಆಯ್ಕೆಯಾದ ನಗರೆಯ ಯುವಕ ವಿನಯ ನಾಯ್ಕಗೆ ಗೌರವ ಪೂರ್ವಕ ಸನ್ಮಾನ
ಜೂನ್ 27ಕ್ಕೆ ತಬಲಾ ಮಾಂತ್ರಿಕ ಕಲ್ಭಾಗ ಗೋಪಾಲಕೃಷ್ಣ ಹೆಗಡೆ ಷಷ್ಠಬ್ಧಿ ಅಭಿನಂದನೆ, ಪುಸ್ತಕ ಬಿಡುಗಡೆ
ಸರ್ಕಾರಿ ಶಾಲೆಗಳ ಬೆಳವಣಿಗೆಗೆ ದಾನಿಗಳ ಸಹಕಾರ ಅಗತ್ಯ; ಬಿಇಒ ಜಯಶ್ರೀ ನಾಯ್ಕ