ಚಿಕ್ಕೋಡಿ ; ನಗರದಲ್ಲಿ ಇಂದು 2025-26ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಹಾಗೂ ಜಿಲ್ಲಾ ಖನಿಜ ನಿಧಿ (DMF) ಅನುದಾನದಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವಿಧ ವಿಧಾನಸಭಾ ಕ್ಷೇತ್ರಗಳ 136 ವಿಶೇಷ ಚೇತನ ಫಲಾನುಭವಿಗಳಿಗೆ ಅಗತ್ಯ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.
ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳಿಗೆ ಸಂಸದೆ Priyanka Jarkiholi ಅವರ MPLADS ಹಾಗೂ 2025-26ನೇ ಸಾಲಿನ ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಅಥಣಿ ಕ್ಷೇತ್ರದ 16 ಹಾಗೂ ಕಾಗವಾಡ ಕ್ಷೇತ್ರದ 15 ಫಲಾನುಭವಿಗಳಿಗೆ ಒಟ್ಟು 31 ಸಾಧನಗಳನ್ನು ವಿತರಿಸಲಾಯಿತು.
ವಿತರಿಸಲಾದ ಸಾಧನಗಳಲ್ಲಿ 10 ವಾಟರ್ ಬೆಡ್ಗಳು, 8 ವೀಲ್ಚೇರ್ಗಳು, 5 ಶ್ರವಣ ಸಾಧನಗಳು, 3 ತ್ರಿಚಕ್ರ ಸೈಕಲ್ಗಳು ಹಾಗೂ 5 ತ್ರಿಚಕ್ರ ಸ್ಕೂಟರ್ಗಳು ಸೇರಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು, ವಿಶೇಷ ಚೇತನ ನಾಗರಿಕರ ದೈನಂದಿನ ಜೀವನವನ್ನು ಸುಗಮಗೊಳಿಸುವುದರ ಜೊತೆಗೆ ಅವರ ಸ್ವಾವಲಂಬನೆ ಹಾಗೂ ಜೀವನಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಧನಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಸಮಾಜದ ಪ್ರತಿಯೊಂದು ವರ್ಗದ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಯೇ ನಮ್ಮ ಬದ್ಧತೆಯಾಗಿದ್ದು, ಜನಸೇವೆಯ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲು ನಿರಂತರವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಹೇಳಿದರು.

More Stories
ನಾರಾಯಣ ಗೌಡರ ಹುಟ್ಟುಹಬ್ಬ: ಆಸ್ಪತ್ರೆಗಳಲ್ಲಿ ಹಣ್ಣು ವಿತರಣೆ
ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ವಿತರಣೆ: ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆಗೆ ಉತ್ತೇಜನ
ವಿಜಯಪುರ: ಸಡಗರದ ಅಹಲ್ಯಾದೇವಿ ಜಯಂತಿ; ನೊಂದ ಮಹಿಳೆಯ ಅಳಲಿಗೆ ತಕ್ಷಣ ಸ್ಪಂದಿಸಿದ ಮಹಿಳಾ ಆಯೋಗದ ಅಧ್ಯಕ್ಷರು