ಭಟ್ಕಳ: ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯ ಪರಿಣಾಮವಾಗಿ ಸ್ಕೂಟರ್ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.
ಆಸರಕೇರಿ ಡೊಂಗರಪಳ್ಳಿ ನಿವಾಸಿ ತೌನ್ಸೆ ಕೈರಾ ಅಲಿಸಾಹೇಬ್ (63) ಅವರು ಭಟ್ಕಳ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ತಂಜಿಮ್ ರಸ್ತೆಯಿಂದ ಆಸರಕೇರಿ ಕಡೆಗೆ ಅತಿವೇಗವಾಗಿ ಬರುತ್ತಿದ್ದ ಸುಜುಕಿ ಬರ್ಗಮನ್ ಸ್ಕೂಟರ್, ಆಸರಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಕ್ರಾಸ್ ಸಮೀಪ ಎದುರುಗಡೆಯಿಂದ ಬರುತ್ತಿದ್ದ ಟಿ.ವಿ.ಎಸ್ ಜುಪಿಟರ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ಭಾಂಗಿ ಅಲ್ತಾಫ್ ಹುಸೇನ್ (48) ಹಾಗೂ ಹಿಂಬದಿ ಸವಾರನಾಗಿದ್ದ ಅವರ ಮೊಮ್ಮಗ ಭಾಂಗಿ ಆರ್ಜಾನ್ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ.
ಗಾಯಗೊAಡ ಅಲ್ತಾಫ್ ಹುಸೇನ್ ಅವರಿಗೆ ಬೆನ್ನು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದು, ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

More Stories
ಎಸ್.ಡಿ.ಎಂ ಸಂಭ್ರಮ-2026 ಹಳೆಯ ವಿದ್ಯಾರ್ಥಿಗಳ ಬೃಹತ್ ಸಮಾವೇಶ, ಏಪ್ರಿಲ್ 4 ಮತ್ತು 5 ರಂದು
ಮುರುಡೇಶ್ವರ ಶಿವ, ರಾಜಗೋಪುರ ಒಂದೇ ಚಿತ್ರದಲ್ಲಿ ಅಚ್ಚರಿ ಮೂಡಿಸಿದ ಹೈದರಾಬಾದ್ ಮೂಲದ ಕಲಾವಿದೆ
ಕೃಷಿ ಭೂಮಿಗೆ ಮಣ್ಣು ತುಂಬುವ ವಿಷಯ ವಿರೋಧ: ಮುಂಡಳ್ಳಿ ಪಂಚಾಯತ್ ಕಚೇರಿ ಮುತ್ತಿಗೆ, ಅಧಿಕಾರಿಗಳ ವಿರುದ್ಧ ಆಕ್ರೋಶ