ಸಿದ್ದಾಪುರ: ಸಿದ್ದಾಪುರ ತಾಲೂಕಿನ (ಹುತ್ಗಾರ) ಬಿಳೇಕಲ್ನ ನಾರಾಯಣ ಹೆಗಡೆ ಅವರ ಮನೆ ಅಂಗಳದಲ್ಲಿ ಏ. 16ರಂದು “ಶ್ರೀಕೃತ” ನಾದೋಪಚಾರ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಂದು ಸಂಜೆ 4:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಸಂಜೆ ೫ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ತಬಲಾ ಕಲಾವಿದ ಪಂ. ರಘುನಾಥ್ ನಾಕೋಡ್ ಮತ್ತು ಡಾ. ರವಿಕಿರಣ್ ನಾಕೋಡ್ ಧಾರವಾಡ ಅವರಿಂದ ತಬಲಾ ಸೋಲೋ ವಾದನ ಜರುಗಲಿದೆ.
ಬಳಿಕ ಖ್ಯಾತ ಗಾಯಕ ಖರ್ವಾ ವಿಶ್ವೇಶ್ವರ ಭಟ್ ಅವರಿಂದ ಗಾಯನ ಸುಧೆ ಹರಿಯಲಿದೆ. ಪಕ್ಕವಾದ್ಯದಲ್ಲಿ ತಬಲಾದಲ್ಲಿ ಗುರುರಾಜ್ ಹೆಗಡೆ ಅಡುಕಳ ಹಾಗೂ ಸಂವಾದಿನಿಯಲ್ಲಿ ಅಜಯ್ ಹೆಗಡೆ, ವರ್ಗಾಸರ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಸಂಯೋಜಕರಾದ ಗಣೇಶ ಬಿಳೇಕಲ್ ತಿಳಿಸಿದ್ದಾರೆ.

More Stories
ಸಿದ್ದಾಪುರದಲ್ಲಿ ಉರ್ದು ಶಾಲೆ ತಡೆಗೋಡೆ ಕಾಮಗಾರಿಗೆ ಬಿಜೆಪಿ ವಿರೋಧ. ತಹಶೀಲ್ದಾರ್ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದ ಕಾರ್ಯಕರ್ತರು
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ರಾಜಾರಾಮ ಹೆಗಡೆ ಅವರಿಗೆ ಅಭಿನಂದನಾ ಸಮಾರಂಭ, ಯಕ್ಷಗಾನ ರಂಗಿನ ಸಾಂಸ್ಕೃತಿಕ ಕಾರ್ಯಕ್ರಮ