April 29, 2026

ಆನಂದಾಶ್ರಮ ಪ್ರೌಢಶಾಲೆಯ ಅಮೋಘ ಸಾಧನೆ

ಕುಮಟಾ : ಗೋಕರ್ಣದಿಂದ ಅನತಿ ದೂರದಲ್ಲಿರುವ ಸುಮಾರು 140 ವರ್ಷಗಳ ಕಾಲ ಇತಿಹಾಸ ಹೊಂದಿರುವ ರೂರಲ್ ಎಜುಕೇಶನ್ ಸೊಸೈಟಿಯ ಆನಂದಾಶ್ರಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ.

ಶಾಲೆಯ ಒಟ್ಟು ಫಲಿತಾಂಶ 98.93% ಆಗಿದೆ. ಉನ್ನತ ಶ್ರೇಣಿಯಲ್ಲಿ 16 , ಪ್ರಥಮ ಶ್ರೇಣಿಯಲ್ಲಿ 44, ದ್ವಿತೀಯ ಶ್ರೇಣಿಯಲ್ಲಿ 22 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ಶಾಲೆಯ ಗುಣಾತ್ಮಕ ಫಲಿತಾಂಶ ಂ ಆಗಿದ್ದು ಪರೀಕ್ಷೆಗೆ ಕುಳಿತ 97 ವಿದ್ಯಾರ್ಥಿಗಳಲ್ಲಿ 95 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಗೆ ಪ್ರಥಮ ಸ್ಥಾನವನ್ನು *ಕೃಷ್ಣ ಜಿ . ಹಿರೇಭಟ್ 574 ಅಂಕ 91.68 %ದ್ವಿತೀಯ ಮಾನ್ಸಿ ರಾಮಚಂದ್ರ ನಾಯ್ಕ್ 556ಅಂಕ 88.96% ತೃತೀಯ ನಾಗಶ್ರೀ ರಾಘವೇಂದ್ರ ಗೌಡ 554ಅಂಕ 88.64% . ಪಡೆದಿರುತ್ತಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆ ಮುಖ್ಯಾದ್ಯಪಕರಾದ ಗಂಗಾಧರ ಭಟ್ , ಶಿಕ್ಷಕರು, ಆಡಳಿತ ಮಂಡಳಿ ಅಧ್ಯಕ್ಷರಾದ ಆತ್ಮರಾಮ್ ಎಸ್ ಬಳವಳ್ಳಿ ಖಜಾಂಚಿಗಳಾದ ಗಜಾನನ ಪಿ. ನಾಡ್ಕರ್ಣಿ ಕಾರ್ಯದರ್ಶಿಗಳಾದ ವಿವೇಕ್ ವಿ. ನಾಡಕರ್ಣಿ ಯವರು, ಮಾತೃ ಸಂಸ್ಥೆಯ ಸದಸ್ಯರುಗಳು ಊರ ನಾಗರಿಕರು ಹಳೆಯ ವಿದ್ಯಾರ್ಥಿಗಳು ಪಾಲಕರು ಶುಭ ಹಾರೈಸಿರುತ್ತಾರೆ.

About The Author

error: Content is protected !!